Advertisement

ಸ್ವಂತ ಪಕ್ಷ ಕಟ್ಟುವತ್ತ ಪ್ರಶಾಂತ್‌ ಕಿಶೋರ್‌?

01:21 AM May 03, 2022 | Team Udayavani |

ಪಟ್ನಾ: ಹತ್ತಾರು ವರ್ಷಗಳಿಂದ ಬಿಜೆಪಿ, ಜೆಡಿಯು, ಟಿಎಂಸಿ, ಆಮ್‌ ಆದ್ಮಿ ಪಾರ್ಟಿ (ಆಪ್‌) ಪಕ್ಷಗಳಿಗೆ ಚುನಾವಣ ವ್ಯೂಹ ರಚನಾಕಾರರಾಗಿ ಆ ಪಕ್ಷಗಳನ್ನು ಅಧಿಕಾರಕ್ಕೆ ತರುವಲ್ಲಿ ಗಮನಾರ್ಹ ಪಾತ್ರ ವಹಿಸಿದ್ದ ಪ್ರಶಾಂತ್‌ ಕಿಶೋರ್‌, ತಮ್ಮ ತವರು ರಾಜ್ಯವಾದ ಬಿಹಾರದಲ್ಲಿ ಹೊಸತೊಂದು ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ.

Advertisement

ಕಾಂಗ್ರೆಸ್‌ ಸೇರುವ ಅವರ ಯತ್ನ ವಿಫ‌ಲದ ಬಳಿಕ ಈ ಬೆಳವಣಿಗೆ ನಡೆದಿದೆ.

ಈ ಕುರಿತಂತೆ ಟ್ವೀಟ್‌ ಮಾಡಿರುವ ಅವರು, “ಜನ ಸ್ವರಾಜ್ಯ’ ಎಂಬ ಪರಿಕಲ್ಪನೆಯಡಿ, ಜನರ ಸಮಸ್ಯೆಗಳನ್ನು ಆಳವಾಗಿ ಅಧ್ಯ ಯನ ಮಾಡಿ, ಪ್ರಜಾಪ್ರಭುತ್ವ ಆಧಾರದಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಮೇ 5ರಂದು ಅವರು ಪತ್ರಿಕಾಗೋಷ್ಠಿ ನಡೆಸಲಿದ್ದು ಅದರಲ್ಲಿ ಅವರ ಉದ್ದೇಶವನ್ನು ಸ್ಪಷ್ಟಪಡಿಸಲಿದ್ದಾರೆ.

2021ರಲ್ಲಿ ಪಶ್ಚಿಮ ಬಂಗಾಲದಲ್ಲಿ ಟಿಎಂಸಿಯನ್ನು ಪುನಃ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದ ಅನಂತರ, ವೃತ್ತಿಪರ ಚುನಾವಣ ವ್ಯೂಹ ರಚನೆಗಾರ ರಾಗಿ ತಾವು ಮುಂದುವರಿಯುವುದಿಲ್ಲ ಎಂದು ಕಿಶೋರ್‌ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next