Advertisement

ಹಿಂದುತ್ವ ಬಿಜೆಪಿಯವರ ಅಪ್ಪನ ಮನೆಯ ಆಸ್ತಿಯಾ?: ಡಿ.ಕೆ.ಶಿವಕುಮಾರ್ ಆಕ್ರೋಶ

04:09 PM Aug 20, 2022 | Team Udayavani |

ಬೆಂಗಳೂರು: ”ಕಾಂಗ್ರೆಸ್ ಹಿಂದುತ್ವ ಒಪ್ಪಿಕೊಳ್ಳಲಿ ಎಂದು‌ ಬಿಜೆಪಿಯವರು ಹೇಳುವುದಕ್ಕೆ  ಹಿಂದುತ್ವ ಅವರಪ್ಪನ ಮನೆಯ ಆಸ್ತಿಯಾ..?  ನಾವೇನು ಹಿಂದೂ ಅಲ್ವೇನ್ರಿ”ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್,  25 ವರ್ಷದ ಹಿಂದೆ ಸೋನಿಯಾ ಗಾಂಧಿ ಮನೆಗೆ ಹೋಗಿದ್ದೆವು. ಅಂದು ಸೋನಿಯಾ ಗಾಂಧಿ  ಅವರು ಯುಗಾದಿ ಹಬ್ಬ ಮಾಡುತ್ತಿದ್ದರು. ನನಗೆ ಶಿವನ ಮಗ ಶಿವಕುಮಾರ ಎಂದು ಹೆಸರಿಟ್ಟಿದ್ದಾರೆ. ಸಿದ‍್ಧರಾಮಯ್ಯಗೆ ರಾಮ ಎಂಬ ಹೆಸರಿಟ್ಟಿದ್ದಾರೆ. ನಾವು ಏನಾದರೂ ಕಲ್ಲು ಮಣ್ಣು ಅಂತಾ ಹೆಸರು ಇಟ್ಟಿಕೊಂಡಿದ್ದೇವಾ ಎಂದು ಪ್ರಶ್ನಿಸಿದರು.

ರಂಭಾಪುರಿ ಮಠದಲ್ಲಿ ಸಿದ‍್ಧರಾಮಯ್ಯ ಪಶ್ಚಾತ್ತಾಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಶ್ರೀಗಳ ಜತೆಗೆ ನಡೆದ ಸಂಭಾಷಣೆ ಬಗ್ಗೆ ನನಗೇನು ಗೊತ್ತಿಲ್ಲ. ಮನುಷ್ಯ ತಪ್ಪು ಮಾಡಿದರೆ ಒಪ್ಪಿಕೊಳ್ಳಬೇಕು. ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ. ನಾವ್ಯಾರು ದೇವರು ಅಲ್ಲ. ತಪ್ಪು ಮಾಡಿದ್ದಾಗ ದೇವರು ಕೂಡ ಒಪ್ಪಿಕೊಂಡಿದ್ದಾರೆ.  ನಾನು ಸಂಪುಟದಲ್ಲಿದ್ದಾಗ ಪ್ರತ್ಯೇಕ ಧರ್ಮ ವಿರೋಧಿಸಿದ್ದೆ. ಧರ್ಮದ ವಿಚಾರದಲ್ಲಿ ಕೈ ಹಾಕಬಾರದು ಅಂದಿದ್ದೆ.  ಬಳಿಕ ಕ್ಷಮೆಯೂ ಕೇಳಿದ್ದೆ. ನಿನ್ನೆ ಶ್ರೀಗಳು ಮತ್ತು  ಸಿದ್ಧರಾಮಯ್ಯ ನಡುವಿನ ಸಂಭಾಷಣೆ ಬಗ್ಗೆ ನನಗೆ ಮಾಹಿತಿ‌ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next