Advertisement

ಕೂಳಗೆರೆ ಏತ ನೀರಾವರಿ: 17 ಕೆರೆಗೆ ನೀರು

01:50 PM Jan 26, 2022 | Team Udayavani |

ಭಾರತೀನಗರ: ರೈತರ ಕೃಷಿ ಜಮೀನುಗಳಿಗೆ ನೀರು ಒದಗಿಸಲು ಜಲಕ್ರಾಂತಿಗೆ ಮುಂದಾಗಿರುವ ಶಾಸಕ ಡಿ.ಸಿ.ತಮ್ಮಣ್ಣನವರು ಏತನೀರಾವರಿ ಪುನಶ್ಚೇತನ ಹಾಗೂ ಹೊಸ ಘಟಕ ನಿರ್ಮಾಣಮಾಡಲು ಶ್ರಮಿಸುತ್ತಿರುವುದು ಈಭಾಗದ ರೈತರ ಸಂತಸಕ್ಕೆ ಕಾರಣವಾಗಿದೆ.

Advertisement

ಮದ್ದೂರು ತಾಲೂಕು ಕಸಬಾ ಹೋಬಳಿಯ ಹಲವಾರು ಗ್ರಾಮಗಳಮಳೆಯಾಶ್ರಿತ ಪ್ರದೇಶಗಳಾ ಗಿದ್ದು,ನೀರಾವರಿಯಿಂದ ಸಂಪೂರ್ಣ ವಂಚಿತವಾಗಿದ್ದವು. ಇದೀಗ ಪ್ರಗತಿಯ ಹಂತದಲ್ಲಿರುವ ಕೂಳ ಗೆರೆ ಏತನೀರಾವರಿ ಯೋಜನೆಯಿಂದ 17 ಕೆರೆಗಳಿಗೆನೀರಿನ ಆಸರೆ ದೊರಕಲಿದೆ. ಈ ಮಹತ್ವಾಕಾಂಕ್ಷೆಯೋಜನೆ ಮೇ ಅಥವಾ ಜೂನ್‌ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆಗಳಿವೆ.

17 ಕೆರೆಗಳಿಗೆ ನೀರು: ಇಗ್ಗಲೂರು ಬ್ಯಾರೇಜ್‌ ಹಿನ್ನೀರಿನಲ್ಲಿ ದೊರೆಯಬಹುದಾದ 574 ಎಂಸಿಎಫ್ಟಿನೀರನ್ನು ಬಳಸಿಕೊಂಡು 77 ಕೋಟಿ ವೆಚ್ಚದಲ್ಲಿಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇಲ್ಲಿದ್ದ73 ಕ್ಯುಸೆಕ್‌ ನೀರನ್ನು ಮೇಲೆತ್ತಿ 17 ಕೆರೆಗಳಿಗೆ ನೀರುಹರಿಸುವಂತೆ ರೂಪಿಸಲಾಗಿದೆ.

ಚಿಕ್ಕರಸಿನಕೆರೆ ಹೋಬಳಿಯ ತಿಟ್ಟಮಾರನಹಳ್ಳಿಏತನೀರಾವರಿಗೆ 44 ಕೋಟಿ, ಚಿಕ್ಕರಸಿನಕೆರೆ ಏತನೀರಾವರಿಗೆ 17.5 ಕೋಟಿ, ಕ್ಯಾತಘಟ್ಟ ಏತನೀರಾವರಿಪುನಶ್ಚೇತನ ಕಾಮಗಾರಿಗೆ 4.97 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿ ಹಂತದಲ್ಲಿ ಸಾಗುತ್ತಿದೆ.

ಮದ್ದೂರಿನ 4, ಮಳವಳ್ಳಿಯ 12 ಕೆರೆಗೆ ನೀರು: ಸೂಳೆಕೆರೆ ಕೋಡಿಯಿಂದ ಹಾಗೂ ವಿಸಿ ನಾಲಾ ಜಾಲದಅಚ್ಚುಕಟ್ಟು ಪ್ರದೇಶಗಳಿಂದ ಬರುವ ಹೆಚ್ಚುವರಿನೀರನ್ನು ಸಂಗ್ರಹ ಮಾಡಿ ತಿಟ್ಟಮಾರನಹಳ್ಳಿ ಏತನೀರಾವರಿ ಯೋಜನೆಯಿಂದ ಹೆಬ್ಟಾಳ ಚೆನ್ನಯ್ಯನಾಲೆಯ ಬಾದಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಯೋಜನೆಯಾಗಿದೆ. ಇದರಿಂದ ಮದ್ದೂರುಕ್ಷೇತ್ರದ 4 ಕೆರೆ, ಮಳವಳ್ಳಿ ಕ್ಷೇತ್ರದ 12 ಕೆರೆಗಳಿಗೆ ನೀರುತುಂಬಿಸಲಾಗುವುದು.

Advertisement

ಬರಗಾಲದ ಬವಣೆಗೆ ಗ್ರಾಮಗಳು: ಮದ್ದೂರು ತಾಲೂಕು ಕಸಬಾ ಮತ್ತು ಆತಗೂರು ಹೋಬಳಿಯಲ್ಲಿರುವ ಹಳ್ಳಿಗಳು ಪೂರ್ಣ ಮಳೆಯಾಶ್ರಿತ ಪ್ರದೇಶವಾಗಿದ್ದವು. ಸುಮಾರು 20 ವರ್ಷಗಳಿಂದ ಈ ಪ್ರದೇಶದಲ್ಲಿ ಮಳೆ ಬಾರದೆ, ಮಳೆಯ ಪ್ರಮಾಣ ಕ್ಷೀಣಿಸುತ್ತಿದ್ದರಿಂದಈ ಭಾಗದ ಕೆರೆ-ಕಟ್ಟೆಗಳು ನೀರು ತುಂಬದೆ ಬರಗಾಲದ ಬವಣೆಗೆ ಸಿಲುಕಿದ್ದವು.

ಈ ಭಾಗದಲ್ಲಿ ಅಂತರ್ಜಲ ಮಟ್ಟವೂ ಪೂರ್ಣ ಪ್ರಮಾಣದಲ್ಲಿ ಕುಸಿದಿತ್ತು. ಸಾವಿರ ಅಡಿ ಆಳಕ್ಕೆ ಕೊರೆಸಿ ದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿರಲಿಲ್ಲ.ಕೆಲವೆಡೆ ನೀರು ಸಿಕ್ಕರೂ ಅದರಲ್ಲಿ ಫ್ಲೋರೈಡ್‌, ನೈಟ್ರೆçಟ್‌ ಅಂಶ ಹೆಚ್ಚಾಗಿತ್ತು. ಇದರಿಂದ ಜನ-ಜಾನುವಾರುಗಳಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿತ್ತು. ಕೆಸ್ತೂರು ಸಮೀಪದ ಮಳೆಯ ಮಾಪನ ಕೇಂದ್ರದವಿವರಗಳನ್ನು ಗಮನಿಸಿದಾಗ ಮಳೆಯ ಸರಾಸರಿ 676.14 ಎಂಎಂ ಇತ್ತು. ಇದರಿಂದ ಕುಡಿಯುವನೀರಿಗೆ ಹಾಹಾಕಾರ ಸೃಷ್ಟಿಯಾಗಿ, ಅಂತರ್ಜಲ ಮಟ್ಟ ಪಾತಾಳ ಸೇರಿಕೊಂಡಿತ್ತು. ಹಾಗಾಗಿ ಈ ಏತನೀರಾವರಿಯೋಜನೆ ನಿರ್ಮಾಣಕ್ಕೆ ಮುಂದಾಗಿದ್ದೇನೆಂದು ಶಾಸಕ ಡಿ.ಸಿ.ತಮ್ಮಣ್ಣ ವಿವರಿಸಿದ್ದಾರೆ.

7 ವರ್ಷಗಳ ನಿರಂತರ ಪ್ರಯತ್ನ: ಕಸಬಾ ಮತ್ತು ಆತಗೂರು ಹೋಬಳಿ ವ್ಯಾಪ್ತಿಯ ಗ್ರಾಮಗಳ ಸ್ಥಿತಿ ಅರಿತ ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಅವರು, ಸತತ 7 ವರ್ಷಗಳ ಭಗೀರಥ ಯತ್ನದ ಫ‌ಲವಾಗಿ ಮಳೆಯನ್ನೇ ನಂಬಿದ್ದ ಗ್ರಾಮಗಳು ಜೀವಜಲವನ್ನು ಕಾಣುವಂತಾಯಿತು.

2013 ರಿಂದ ಇಲ್ಲಿಯವರೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಯೋಜನೆಯ ಬಗ್ಗೆ ಚರ್ಚಿಸಿ, ಜನರು ಅನುಭವಿಸುತ್ತಿರುವ ನೀರಿನ ಬವಣೆ ನಿವಾರಿಸುವ ದೃಷ್ಟಿಯಿಂದ ಸರ್ಕಾರದ ಮಟ್ಟದಲ್ಲೂ ಚರ್ಚಿಸಿ ಈ ಭಾಗಗಳಲ್ಲಿ ಬರುವ ಕೆರೆಗಳಿಗೆ ಶಿಂಷಾ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ವೃದ್ಧಿಯಾಗಿ ಕೊಳವೆ ಬಾವಿಗಳಿಗೆ ನೀರು ಲಭ್ಯವಾಗಲಿದೆ ಎಂಬುವುದನ್ನು ಅರ್ಥೈಸಿಕೊಟ್ಟರು. ಸರ್ಕಾರ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ನುರಿತ ಅನುಭವವುಗಳ್ಳ ತಜ್ಞರಿಂದ ವರದಿ ಪಡೆಯಿತು. ಅಂತಿಮವಾಗಿ 77 ಕೋಟಿ ರೂ.ಗಳಿಗೆ 2018 ರಲ್ಲಿ ತಾಂತ್ರಿಕ ಮಂಜೂರಾತಿ ನೀಡಿ 13 ಜೂನ್‌ 2019 ರಲ್ಲಿ ಹೈದರಾಬಾದ್‌ ಮೂಲದ ಕೋಯಾ ಅಂಡ್‌ ಕಂಪನಿ ಕನ್‌ಸ್ಟ್ರಕ್ಷನ್‌ ಕಂಪನಿಗೆ ಕಾಮಗಾರಿ ವಹಿಸಿತು.

ನೀರಿನ ಮೂಲ ಯಾವುದು? :  ಶಿಂಷಾ ನದಿ ಸದಾಕಾಲ ನೀರು ಹರಿಯುವ ನದಿಯಲ್ಲ. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ನದಿ. ಕೃಷ್ಣರಾಜಸಾಗರ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗಳಿಗೆ ನಿರು ಹರಿಸಿದಾಗ ಅಚ್ಚುಕಚ್ಚು ಪ್ರದೇಶಗಳ ಬಸಿ ನೀರು ಹಳ್ಳ-ಕೊಳ್ಳಗಳಲ್ಲಿ ಹರಿದುಬಂದು ಕೊಪ್ಪ ಕೆರೆ, ಮದ್ದೂರು ಕೆರೆ ಮತ್ತು ಸೂಳೆಕೆರೆ ತುಂಬಿ ಹೆಚ್ಚುವರಿ ನೀರು ಹರಿದುಬಂದು ಶಿಂಷಾ ನದಿ ಸೇರುತ್ತಿದೆ. ಸೂಳೆಕೆರೆಯಿಂದ ಬರುವ ಹೆಚ್ಚಿನ ನೀರು ಹೆಬ್ಟಾಳದ ಮೂಲಕ ಹರಿದುಬಂದು ಬನ್ನಹಳ್ಳಿ-ಕೂಳಗೆರೆ ಹತ್ತಿರವಿರುವ ಶಿಂಷಾ ನದಿ ಸೇರುತ್ತಿದೆ. ಈ ಸ್ಥಳದಲ್ಲಿ ಯೋಜನೆಗೆ ಸಾಕಾಗುವಷ್ಟು ನೀರು ಲಭ್ಯವಾಗುವುದರಿಂದ ಸದರಿ ಸ್ಥಳದಿಂದ ಬನ್ನಹಳ್ಳಿ ಮತ್ತು ಕೂಳಗೆರೆ ಗ್ರಾಮಗಳ ಮಧ್ಯಭಾಗದ ನದಿ ತೀರದಲ್ಲಿ ನೀರೆತ್ತುವ ಯೋಜನೆ ರೂಪುಗೊಂಡಿದೆ.

ಯಾವ್ಯಾವ ಕೆರೆಗಳಿಗೆ ಬರುತ್ತೇ ನೀರು? :

ಮದ್ದೂರು ತಾಲೂಕು ಕಸಬಾ ಹೋಬಳಿ ಶಿಂಷಾ ಎಡದಂಡೆಯಲ್ಲಿ ಬರುವ ತಿಪ್ಪೂರು ಕೆರೆ, ಕೊಕ್ಕರೆ ಬೆಳ್ಳೂರು, ಅಂಕೇದೊಡ್ಡಿ, ಹಳ್ಳಿಕೆರೆ, ಹಾಗಲಹಳ್ಳಿ, ಕಬ್ಟಾರೆ, ಕೆ.ಹೊನ್ನಲಗೆರೆಯ ಚಿಕ್ಕ ಮತ್ತು ದೊಡ್ಡಕೆರೆ, ಭೀಮನಕೆರೆ, ಬ್ಯಾಡರಹಳ್ಳಿ, ಬಾಣೋಜಿಪಂತ್‌, ರಾಜೇಗೌಡನದೊಡ್ಡಿ, ಮಾದನಾಯಕನಹಳ್ಳಿ, ತೈಲೂರು, ಆಲೂರು, ನೀಲಕಂಠನಹಳ್ಳಿ, ಅರೆಕಲ್ಲುದೊಡ್ಡಿ ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ. ಇವುಗಳಲ್ಲದೆ ಈ ವ್ಯಾಪ್ತಿಯ ಗ್ರಾಮಗಳಲ್ಲಿ ಕೆಲವೊಂದು ಕಟ್ಟೆಗಳು ಬರಲಿದ್ದು, ಅವುಗಳಿಗೂ ನೀರು  ತುಂಬಿಸಲು ಪೈಪ್‌ಲೈನ್‌ ಅಳವಡಿಸಲಾಗಿದೆ.

ನಮ್ಮ ನೀರು ನಮ್ಮಲ್ಲೇ ಉಳಿಯಬೇಕೆಂದು ಕೂಳಗೆರೆ ಏತನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಮೇ ಅಥವಾ ಜೂನ್‌ ತಿಂಗಳಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮಳೆಯನ್ನೇ ನಂಬಿದ್ದ 17 ಕೆರೆಗಳಿಗೆ ನೀರು ದೊರಕಿದಂತಾಗಲಿದೆ. ಪೈಪ್‌ಲೈನ್‌ ಹಾದು ಹೋಗುವ ಮಾರ್ಗದಲ್ಲಿ ಬರುವ ಕೆರೆಕಟ್ಟೆಗಳನ್ನು ತುಂಬಿಸುವುದಕ್ಕೂ ಪ್ರಾಮುಖ್ಯತೆ ನೀಡಿದ್ದೇನೆ. ಯೋಜನೆಯಿಂದ ಸಾವಿರಾರು ಎಕರೆ ಕೃಷಿ ಪ್ರದೇಶಕ್ಕೂ ನೀರು ದೊರೆಯಲಿದೆ -ಡಿ.ಸಿ.ತಮ್ಮಣ್ಣ, ಶಾಸಕರು. ಮದ್ದೂರು ಕ್ಷೇತ್ರ

 

-ಅಣ್ಣೂರು ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next