Advertisement

ಕೋವಿಡ್‌ ಸೋಂಕಿತರ ನೆರವಿಗೆ ಧಾವಿಸಿದ ಪಠಾಣ್ಸ್

10:28 PM May 05, 2021 | Team Udayavani |

ಹೊಸದಿಲ್ಲಿ: ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಕೊರೊನಾ ಸೋಂಕಿತರ ನೆರವಿಗೆ ಧಾವಿಸಿದ್ದಾರೆ. ತಮ್ಮ ಅಕಾಡೆಮಿಯಿಂದ ದಕ್ಷಿಣ ದಿಲ್ಲಿಯ ಕೋವಿಡ್‌ ಸೋಂಕಿತರಿಗೆ ಉಚಿತ ಊಟ, ಆಹಾರ ಸರಬರಾಜು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.

Advertisement

“ದೇಶ ಎರಡನೇ ಕೋವಿಡ್ ಅಲೆಯಿಂದ ತತ್ತರಿಸುತ್ತಿದ್ದು, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯವಾಗಿದೆ. ನಾವು ಕ್ರಿಕೆಟ್‌ ಅಕಾಡೆಮಿ ಆಫ್ ಪಠಾಣ್ಸ್ (ಸಿಎಪಿ) ವತಿಯಿಂದ ದಕ್ಷಿಣ ದಿಲ್ಲಿಯ ಕೊರೊನಾ ಪೀಡಿತರಿಗೆ ಉಚಿತ ಊಟವನ್ನು ನೀಡುವ ನಿರ್ಧಾರಕ್ಕೆ ಬಂದಿದ್ದೇವೆ’ ಎಂಬುದಾಗಿ ಇರ್ಫಾನ್‌ ಪಠಾಣ್‌ ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಮೊದಲು ಪಠಾಣ್‌ ಸೋದರರ ತಂದೆ ಮೆಹಮೂದ್‌ ಖಾನ್‌ ಕೂಡ ವಡೋದರದಲ್ಲಿ ಕೋವಿಡ್ ಸೋಂಕಿತರಿಗೆ ತಮ್ಮ ಚಾರಿಟೆಬಲ್‌ ಟ್ರಸ್ಟ್‌ನಿಂದ ಉಚಿತ ಆಹಾರ ವ್ಯವಸ್ಥೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next