Advertisement

ಭಾರತ ಕ್ರಿಕೆಟ್‌ ಉನ್ನತಿಗೆ ಗಂಗೂಲಿ,ಧೋನಿ,ಕೊಹ್ಲಿ ಕಾರಣ!

06:05 AM Feb 22, 2018 | Team Udayavani |

ಬರೋಡ: ಭಾರತ ಕ್ರಿಕೆಟ್‌ನ ಖ್ಯಾತ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಇರ್ಫಾನ್‌ ಪಠಾಣ್‌ ಭಾರತೀಯ ಕ್ರಿಕೆಟ್‌ನ ಈ ಉನ್ನತಿಗೆ ಕಾರಣರಾರೆಂದು ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದಕ್ಕೆ ಅಭಿಮಾನಿಗಳಿಂದ ವಿಶೇಷ ಉತ್ತರ ಸಿಕ್ಕಿದೆ.

Advertisement

ಬಹುತೇಕ ಅಭಿಮಾನಿಗಳು ಮಾಜಿ ನಾಯಕರಾದ ಸೌರವ್‌ ಗಂಗೂಲಿ, ಮಹೇಂದ್ರ ಸಿಂಗ್‌ ಧೋನಿ ಮತ್ತು ಈಗ ವಿರಾಟ್‌ ಕೊಹ್ಲಿ ಎಂದು ಉತ್ತರ ನೀಡಿದ್ದಾರೆ. ಇನ್ನೊಬ್ಬ ಅಭಿಮಾನಿ ಇನ್ನೂ ವಿಶೇಷ ಉತ್ತರ ನೀಡಿ ಈ ಮೂವರು ನಾಯಕರ ಅವಧಿಯಲ್ಲಿ ಕೋಚ್‌ ಆಗಿದ್ದ ಜಾನ್‌ ರೈಟ್‌, ಗ್ಯಾರಿ ಕರ್ಸ್ಟನ್‌, ಅನಿಲ್‌ ಕುಂಬ್ಳೆ ಹೆಸರು ಪ್ರಸ್ತಾಪಿಸಿದ್ದಾರೆ. ಭಾರತೀಯ ಕ್ರಿಕೆಟ್‌ ಮಟ್ಟಿಗೆ ಇವರ ಕೊಡುಗೆ ಪರಿಗಣಿಸಿದರೆ ಇದು ಅತ್ಯುತ್ತಮ ಉತ್ತರ ಆಗಬಲ್ಲದು.

Advertisement

Udayavani is now on Telegram. Click here to join our channel and stay updated with the latest news.

Next