Advertisement

ಐಆರ್‌ಸಿಟಿಸಿ ಹಗರಣ: ಮಾಜಿ ಸಿಎಂ ರಾಬ್ರಿ, ತೇಜಸ್ವಿಗೆ ಜಾಮೀನು ಮಂಜೂರು

12:01 PM Aug 31, 2018 | udayavani editorial |

ಹೊಸದಿಲ್ಲಿ : 2006ರ ಐಆರ್‌ಸಿಟಿಸಿ ಹೋಟೆಲ್‌ ನಿರ್ವಹಣೆ ಗುತ್ತಿಗೆ ಹಗರಣದಲ್ಲಿ ದಿಲ್ಲಿಯ ಪಟಿಯಾಲಾ ಹೌಸ್‌ ಕೋರ್ಟ್‌, ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ಮತ್ತು ಆಕೆಯ ಪುತ್ರ ಹಾಗೂ ಆರ್‌ಜೆಡಿ ನಾಯಕನಾಗಿರುವ ತೇಜಸ್ವಿ ಯಾದವ್‌ ಸೇರಿದಂತೆ ಎಲ್ಲ ಆರೋಪಿಗಳಿಗೆ ಇಂದು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

Advertisement

ಬಹುಕೋಟಿ ಮೇವು ಹಗರಣದ ಅಪರಾಧಿಯಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಈಗಾಗಲೇ ಜೈಲುಪಾಲಾಗಿರುವ ಹಿನ್ನೆಲೆಯಲ್ಲಿ ಯಾದವ್‌ ಕುಟುಂಬಕ್ಕೆ ಇಂದು ಕೋರ್ಟಿನಿಂದ ಸಿಕ್ಕಿರುವ ಜಾಮೀನಿಂದ ಭಾರೀ ರಿಲೀಫ್ ಸಿಕ್ಕಿದಂತಾಗಿದೆ. 

ಐಆರ್‌ಸಿಟಿಸಿ ಹಗರಣಕ್ಕೆ ಸಂಬಂಧಿಸಿ ಯಾದವ್‌ ಕುಟುಂಬ ಸಹಿತ ಎಲ್ಲ ಆರೋಪಿಗಳಿಗೆ ತಲಾ 1 ಲಕ್ಷ ರೂ. ಭದ್ರತೆ ಮತ್ತು ವೈಯಕ್ತಿಕ ಬಾಂಡ್‌ ಆಧಾರದಲ್ಲಿ ಕೋರ್ಟ್‌ ಜಾಮೀನು ಮಂಜೂರು ಮಾಡಿತು. 

Advertisement

Udayavani is now on Telegram. Click here to join our channel and stay updated with the latest news.

Next