Advertisement

ವಾತಾವರಣ ತಿಳಿಯಾದರಷ್ಟೇ ಐಪಿಎಲ್‌ ಪಂದ್ಯಾವಳಿ: ರಿಜಿಜು

10:09 AM Mar 21, 2020 | Team Udayavani |

ಹೊಸದಿಲ್ಲಿ: ಕೋವಿಡ್ 19 ವಿಶ್ವವ್ಯಾಪಿ ತಾಂಡವವಾಡುತ್ತಿರುವ ಈ ಹೊತ್ತಿನಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟ್‌ ಲೀಗ್‌ ಆಗಿರುವ ಐಪಿಎಲ್‌ ಟಿ20 ಕೂಟ ಮುಂದೂಡಲ್ಪಟ್ಟಿದೆ. ಎ. 15ರ ಅನಂತರ ಈ ಕೂಟವನ್ನು ನಡೆಸಲು 5 ದಿನಾಂಕಗಳನ್ನು ಬಿಸಿಸಿಐ ಸೂಚಿಸಿದ್ದು ತುಸು ಹಳೆಯ ಸುದ್ದಿ. ಇದನ್ನು ಜುಲೈ-ಸೆಪ್ಟಂಬರ್‌ನಲ್ಲಿ ನಡೆಸಲು “ಬಿ ಪ್ಲ್ರಾನ್‌’ ಸಿದ್ಧಗೊಂಡಿದೆ ಎಂಬುದು ಒಂದು ದಿನದ ಹಿಂದಿನ ಸುದ್ದಿಯಾಗಿತ್ತು. ಆದರೆ ಗುರುವಾರ ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು, ಕೊರೊನಾ ಭೀತಿ ದೂರವಾಗಿ ವಾತಾವರಣ ತಿಳಿಯಾದರಷ್ಟೇ ಐಪಿಎಲ್‌ಗೆ ಅನುಮತಿ ನೀಡಲಾಗುವುದು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next