Advertisement

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ತಂಡದ ಮೇಲೆ ಪೋಲೀಸರ ದಾಳಿ ಐವರ ಬಂಧನ

06:47 PM Oct 03, 2020 | sudhir |

ವಿಜಯಪುರ : ಜಿಲ್ಲೆಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಮುಂದು ವರೆದಿದ್ದು, ಜಿಲ್ಲೆಯ ಅಪರಾಧ ವಿಭಾಗದ ದಳದ ಪೊಲೀಸರು ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆಸಿ, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಸಮರ ಸಾರಿರುವ ಜಿಲ್ಲೆಯ ಪೊಲೀಸರು, ಎಸ್ಪಿ ಅನುಪಮ ಅಗರವಾಲ್ ಹಾಗೂ ಎಎಸ್ಪಿ ರಾಮ ಅರಸಿದ್ಧಿ ಅವರ ಮಾರ್ಗದರ್ಶನದಲ್ಲಿ ಸಿಎಸ್‍ಎನ್ ವಿಭಾಗದ ಸಿಪಿಐ ಸುರೇಶ ಬೆಂಡೆಗುಂಬಳ ನೃತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಆ.1 ರಂದು ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಸವನಬಾಗೇವಾಡಿ ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ. ಬಂಧಿತರರನ್ನು ಸೋಮನಾಥ ರಾಮಚಂದ್ರ ಜಾಧವ (24), ಅಶೋಕ ಬಸವರಾಜ ಗಾಣಿಗೇರ (31), ಸಂತೋಷ ಶಿವಪ್ಪ ಚಿಂಚೊಳ್ಳಿ (28) ಎಂಬ ಮೂವರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ನಿಡಗುಂದಿ ಪಟ್ಟಣದ ಕೃಷ್ಣಾ ನಗದ ನಿವಾಸಿ ವಿಜಯ ಹಣಮಂತ ಚಿತ್ರದುರ್ಗ (29) ಹಾಗೂ ಕೆಎಚ್‍ಬಿ ಕಾಲೋನಿ ನಿವಾಸಿ ಮಂಜುನಾಥ ಸಂಗಪ್ಪ ಚೌಧರಿ (29) ಎಂಬ ಇಬ್ಬರು ಆರೋಪಿಳನ್ನು ಬಂಧಿಸಿದ್ದಾರೆ. ಈ ಕುರಿತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡೂ ಪ್ರತ್ಯೇಕ ಪ್ರಕರಣದಲ್ಲಿ ಬೆಟ್ಟಿಂಗ್‍ನಲ್ಲಿ ತೊಡಗಿಸಿದ್ದ 61,500 ನಗದು, 4 ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಅನುಪಮ ಅಗರªಲ್ ತಿಳಿಸಿದ್ದಾರೆ.

Advertisement

**

ನಿಷೇಧಿತ ತಂಬಾಕಿನ ಮಾವಾ ತಯಾರಿಸಿದ ಇಬ್ಬರ ಬಂಧನ

ವಿಜಯಪುರ : ನಿಷೇಧಿತ ತಂಬಾಕು ಹಾಗೂ ಅಡಿಕೆ ಬಳಸಿ ಅಕ್ರಮವಾಗಿ ಮಾವಾ ತಯಾರಿಕೆಯಲ್ಲಿ ತೊಡಗಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಜಿಲ್ಲೆಯ ಅಪರಾಧ ವಿಭಾಗದ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ.

ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಅಕ್ರಮವಾಗಿ ಶಡ್‍ನಲ್ಲಿ ನಿಷೇಧಿತ ತಂಬಾಕು, ಅಡಿಕೆ ಹಾಗೂ ಸುಣ್ಣ ಬಳಸಿ ಮಾವಾ ಎಂಬ ತಂಬಾಕು ಉತ್ಪನ್ನ ತಯಾರಿಸುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಸಿಪಿಐ ಸಿ.ಬಿ.ಬಾಗೇವಾಡಿ ನೇತೃತ್ವದಲ್ಲಿ ದಾಳಿ ನಡೆಸಿದ ಅಪರಾಧ ವಿಭಾಗದ ಪೊಲೀಸರ ತಂಡ, 27 ವರ್ಷದ ಸಲೀಂ ಸೈಫನಸಾಬ್ ಐಹೊಳ್ಳಿ ಹಾಗೂ 22 ವರ್ಷದ ರಾಘವೇಂದ್ರ ಬಂದಪ್ಪ ಎಂಬ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಿಂದ 13,950 ರೂ. ಮೌಲ್ಯದ 50 ಕೆಜಿ ಮಾವಾ, 120 ಕೆ.ಜಿ ಕಚ್ಚಾ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ಎಸ್ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next