Advertisement

15 ರನ್‌ ಕೊರತೆ ಕಾಡಿತು: ಕೊಹ್ಲಿ

06:55 AM Apr 10, 2018 | Team Udayavani |

ಕೋಲ್ಕತಾ: ಹನ್ನೊಂದನೇ ಐಪಿಎಲ್‌ನಲ್ಲಿ ಆರ್‌ಸಿಬಿ ಸೋಲಿನ ಆರಂಭ ಕಂಡಿದೆ. ರವಿವಾರ ರಾತ್ರಿ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಕೆಕೆಆರ್‌ 4 ವಿಕೆಟ್‌ಗಳಿಂದ ಕೊಹ್ಲಿ ಪಡೆಯನ್ನು ಮಗುಚಿತು.

Advertisement

ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ, “ತಂಡಕ್ಕೆ 15 ರನ್ನುಗಳ ಕೊರತೆ ಕಾಡಿತು. ಇದಕ್ಕೆ ನಾನು ಕೂಡ ಹೊಣೆ. ಸಾಕಷ್ಟು ಡಾಟ್‌ ಬಾಲ್‌ಗ‌ಳನ್ನು ಆಡಿದೆ. ನಾನು ಮತ್ತು ಎಬಿಡಿ ಸತತ ಎಸೆತಗಳಲ್ಲಿ ಔಟಾದದ್ದೂ ಹಿನ್ನಡೆಗೆ ಕಾರಣವಾಯಿತು. ಪಾರ್ಟ್‌ಟೈಮ್‌ ಬೌಲರ್‌ ನಿತೀಶ್‌ ರಾಣ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಇಲ್ಲಿ ಸ್ಪಿನ್ನರ್‌ಗಳಿಗೆ ಬೌಲಿಂಗ್‌ ಕಷ್ಟವಾಗಿತ್ತು’ ಎಂದರು.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆರ್‌ಸಿಬಿ 7 ವಿಕೆಟಿಗೆ 176 ರನ್‌ ಬಾರಿಸಿದರೆ, ಕೆಕೆಆರ್‌ 18.5 ಓವರ್‌ಗಳಲ್ಲಿ 6 ವಿಕೆಟಿಗೆ 177 ರನ್‌ ಗಳಿಸಿತು. ಆರಂಭಕಾರ ಸುನೀಲ್‌ ನಾರಾಯಣ್‌ 19 ಎಸೆತಗಳಿಂದ 50 ರನ್‌ (4 ಬೌಂಡರಿ, 5 ಸಿಕ್ಸರ್‌) ಸಿಡಿಸಿ ಆರ್‌ಸಿಬಿಗೆ ಮಾರಕವಾಗಿ ಪರಿಣಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next