Advertisement

ಮಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ, ಉದ್ಯೋಗ ಮೇಳ: ಸಚಿವ ಜಗದೀಶ ಶೆಟ್ಟರ್‌

12:37 AM Mar 01, 2020 | mahesh |

ಮಂಗಳೂರು: ಮಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶವನ್ನು ಎಪ್ರಿಲ್‌ ಅಂತ್ಯದಲ್ಲಿ ಅಥವಾ ಮೇ ಪ್ರಥಮ ವಾರದಲ್ಲಿ ನಡೆಸಲಾಗುವುದು ಹಾಗೂ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

Advertisement

ಜಿಲ್ಲಾ ಕೈಗಾರಿಕಾ ಕೇಂದ್ರದ ಆಶ್ರಯ ದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕೈಗಾರಿಕಾಭಿವೃದ್ಧಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು ರಾಜ್ಯದಲ್ಲಿ ನ. 3ರಿಂದ 5ರ ವರೆಗೆ ವಿಶ್ವಮಟ್ಟದ ಹೂಡಿಕೆದಾರರ ಸಮಾವೇಶ ಜರಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಟೈರ್‌-2ನಗರಗಳನ್ನು ಔದ್ಯೋಗಿಕವಾಗಿ ಅಭಿವೃದ್ಧಿ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೈಗಾರಿಕಾ ಸ್ನೇಹಿ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದೇನೆ ಎಂದರು.

10 ಕಡೆ ಕೈಗಾರಿಕಾ ಟೌನ್‌ಶಿಪ್‌
ರಾಜ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್‌ಗ್ಳನ್ನು ರೂಪಿಸಲು ನಗರಾಭಿವೃದ್ಧಿ ಇಲಾಖೆ ಯಿಂದ ಇರುವ ನಿಯಮ ಅಡಚಣೆ ಗಳನ್ನು ನಿವಾರಿಸಿ ಬೈಕಂಪಾಡಿ ಸೇರಿದಂತೆ 10 ಕಡೆ ಕೈಗಾರಿಕಾ ಟೌನ್‌ಶಿಪ್‌ಗ್ಳನ್ನು ಸ್ಥಾಪಿಸಲಾಗುವುದು ಎಂದರು. ಗುರುಪುರ ಸೇತುವೆ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಜಿಲ್ಲೆಯಲ್ಲಿ ಧಾರ್ಮಿಕ, ಬೀಚ್‌, ಮೆಡಿಕಲ್‌ ಟೂರಿಸಂಗೆ ಹೆಚ್ಚಿನ ಅವಕಾಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು. ಬಂಟ್ವಾಳ ದಲ್ಲಿ ಕೋಕೋನಟ್‌ ಪಾರ್ಕ್‌ ಸ್ಥಾಪನೆ ಪ್ರಸ್ತಾವ ಇದೆ. ಕುಲಶೇಖರ-ಕಾರ್ಕಳ ರಸ್ತೆಗೆ ಈಗಾಗಲೇ 18 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಗುರುಪುರ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಮೇ ಅಂತ್ಯಕ್ಕೆ ಉದ್ಘಾಟನೆಗೊಳ್ಳಲಿದೆ ಎಂದರು.

ಕಾನ್ಫೆಡರೆನ್ಸ್‌ ಆಫ್‌ ಇಂಡಿಯನ್‌ ಇಂಡಸ್ಟ್ರೀಸ್‌ ಮಂಗಳೂರು ಇದರ ಉಪಾಧ್ಯಕ್ಷ ಗೌರವ ಹೆಗ್ಡೆ ಅವರು, ಕೈಗಾರಿಕೆಗಳ ಪರವಾಗಿ ಮನವಿ ಸಲ್ಲಿಸಿದ್ದು ಕೈಗಾರಿಕೆಗಳಿಗೆ ಮೂಲಸೌಕರ್ಯಗಳನ್ನು ಉನ್ನತೀಕರಿಸಬೇಕು, ಟ್ರಕ್‌ ಟರ್ಮಿನಲ್‌ ನಿರ್ಮಾಣ, ಬೈಕಂಪಾಡಿ ಕೈಗಾರಿಕಾ ಟೌನ್‌ಶಿಪ್‌ ರಚಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟರು. ಶಾಸಕರಾದ ಯು.ಟಿ. ಖಾದರ್‌, ಡಾ| ವೈ. ಭರತ್‌ ಶೆಟ್ಟಿ ,ವಿಧಾನಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೆಐಎಡಿಬಿ ಸಿಇಒ ಬಸವರಾಜೇಂದ್ರ ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್‌ದಾಸ್‌ ನಾಯಕ್‌ ಅವರು ಸ್ವಾಗತಿಸಿದರು.

ಕಾರ್ನಾಡ್‌ನ‌ಲ್ಲಿ ಟಾಟಾ ಕನ್ಸಲ್ಟೆನ್ಸಿ ಉದ್ಯಮ
ಮೂಲ್ಕಿ ಕಾರ್ನಾಡ್‌ ಕೈಗಾರಿಕಾ ಪ್ರದೇಶದಲ್ಲಿ ಐಟಿ ಎಸ್‌ಇಝಡ್‌ ಸ್ಥಾಪನೆಗೊಳ್ಳ ಲಿದ್ದು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ ಸಂಸ್ಥೆ ಈಗಾಗಲೇ ಪ್ರಸ್ತಾವ ಇರಿಸಿದೆ. 495 ಕೋ.ರೂ. ವೆಚ್ಚದಲ್ಲಿ ಸಂಸ್ಥೆ ಉದ್ಯಮವನ್ನು ಸ್ಥಾಪಿಸಲಿದ್ದು ಸುಮಾರು 4 ಸಾವಿರ ಮಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಶೆಟ್ಟರ್‌ ತಿಳಿಸಿದರು.

Advertisement

ಮೇ 29: ಹುಬ್ಬಳ್ಳಿಗೆ ವಿಮಾನ ಸೇವೆ
ಮಂಗಳೂರಿನಿಂದ ಹುಬ್ಬಳಿಗೆ ವಿಮಾನಯಾನ ಸೇವೆ ಮೇ 29ರಿಂದ ಆರಂಭ ಗೊಳ್ಳಲಿದೆ. ಉಡಾನ್‌ ಯೋಜನೆ ಮೂಲಕ ಎಲ್ಲ ಜಿಲ್ಲೆಗಳಿಗೂ ವಿಮಾನಯಾನ ಸಂಪರ್ಕಿಸುವ ಗುರಿಯನ್ನು ಹೊಂದಲಾಗಿದೆ ಎಂದು ಶೆಟ್ಟರ್‌ ಹೇಳಿದರು.

 ಕರ್ನಿರೆ, ಅತಿಕಾರಿಬೆಟ್ಟುವಿನಲ್ಲಿ 800 ಎಕ್ರೆ ಲ್ಯಾಂಡ್‌ಬ್ಯಾಂಕ್‌ ಸ್ಥಾಪನೆ ಪ್ರಸ್ತಾವ
 ಗಂಜಿಮಠದಲ್ಲಿ ಇಪಿಪಿ ಪಾರ್ಕ್‌
ನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ಗೆ 104 ಎಕ್ರೆ ಜಾಗ ಮೀಸಲು, ಇನ್ನೂ 100 ಎಕ್ರೆ ಭೂಸ್ವಾಧೀನ ಪ್ರಸ್ತಾವ
 ಎಂಆರ್‌ಪಿಎಲ್‌ 4ನೇ ಹಂತಕ್ಕೆ 1,050 ಎಕ್ರೆ ಭೂಸ್ವಾಧೀನ ಪ್ರಸ್ತಾವ, 982 ಎಕ್ರೆ ಭೂಸಾœಧೀನ ಪ್ರಕ್ರಿಯೆ ಅಂತಿಮ ಘಟ್ಟದಲ್ಲಿ
ಬೈಕಂಪಾಡಿ ಜೆಸ್ಕೊ ಭೂಸ್ವಾಧೀನ ದಲ್ಲಿ 160 ಎಕ್ರೆ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆಗೆ ನೀಡಿಕೆ.

Advertisement

Udayavani is now on Telegram. Click here to join our channel and stay updated with the latest news.

Next