Advertisement

ಹಣ ಹೂಡಿಕೆ, ಲಾಭ ನೆಪದಲ್ಲಿ ವಿದ್ಯಾರ್ಥಿಗೆ 1.8 ಲಕ್ಷ ರೂ. ಟೋಪಿ

12:54 PM Apr 18, 2023 | Team Udayavani |

ಬೆಂಗಳೂರು: ಕಾಯಿನ್‌ ಲೀಸ್ಟ್‌ನಲ್ಲಿ ಹಣ ಹೂಡಿಕೆ ಮಾಡಿ ಲಾಭಗಳಿಸುವುದಾಗಿ ನಂಬಿಸಿದ ಸೈಬರ್‌ ಕಳ್ಳರು ವಿದ್ಯಾರ್ಥಿಗೆ 1.80 ಲಕ್ಷ ರೂ. ವಂಚಿಸಿದ್ದಾರೆ. ಶಾಂತಿನಗರದ ನಿವಾಸಿ ವಿಶಾಲ್‌ (27) ವಂಚನೆಗೊಳಗಾದ ವಿದ್ಯಾರ್ಥಿ.

Advertisement

ಕಾಯಿನ್‌ ಲೀಸ್ಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಗಳಿಸಬಹುದು ಎಂದು ವಿಶಾಲ್‌ ಅವರ ವಾಟ್ಸ್‌ಆ್ಯಪ್‌ಗೆ ಇತ್ತೀಚೆಗೆ ಅಪರಿಚಿತರು ಸಂದೇಶ ಕಳುಹಿಸಿದ್ದರು. ಆರೋಪಿಗಳ ಸೂಚಿಸಿದ ಬ್ಯಾಂಕ್‌ ಖಾತೆಗೆ ಮೊದಲು 3,850 ರೂ. ಜಮೆ ಮಾಡಿದ್ದರು. ನೀವು ಇನ್ನೂ ಹಣ ಹಾಕದಿದ್ದರೆ ಈಗ ಹಾಕಿದ ಹಣ ವಾಪಸ್‌ ಆಗುವುದಿಲ್ಲ ಎಂದು ಅಪರಿಚಿತರು ಹೇಳಿದ್ದರು. ಅದರಂತೆ ವಿಶಾಲ್‌ ಹಂತ-ಹಂತವಾಗಿ 1.80 ಲಕ್ಷ ರೂ. ಜಮೆ ಮಾಡಿದ್ದರು. ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next