Advertisement

ಅಂತಾರಾಷ್ಟ್ರೀಯ ಸಮಾವೇಶ

02:40 AM Jul 14, 2017 | Team Udayavani |

ಉಡುಪಿ: ಅಪ್ಲೆ„ಡ್‌ ಸೈನ್ಸಸ್‌, ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶ ಮಣಿಪಾಲದಲ್ಲಿ ಮಣಿಪಾಲ ವಿ.ವಿ. ಮತ್ತು ವಿಯಟ್ನಾಮ್‌ನ ಎನ್‌ಗುವೆನ್‌ ಟ್ಯಾಟ್‌ ತಾನ್‌ ವಿ.ವಿ. ಸಹಯೋಗದಲ್ಲಿ ನಡೆಯಿತು. 

Advertisement

ಮಣಿಪಾಲ ವಿ.ವಿ. ಪ್ರವೇಶಾತಿ ನಿರ್ದೇಶಕ ಡಾ|ಶ್ರೀಕಾಂತ ರಾವ್‌ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಎಂಐಟಿ ಜಂಟಿ ನಿರ್ದೇಶಕ ಡಾ|ಬಿ.ಎಚ್‌.ವಿ. ಪೈ ಅಧ್ಯಕ್ಷತೆ ವಹಿಸಿದ್ದರು. ವಿಯೆಟ್ನಾಮ್‌ನ ಡಾ|ತುವಾನ್‌ ಮುಖ್ಯ ಅತಿಥಿಗಳಾಗಿದ್ದರು. ಸಂಚಾಲಕ ಡಾ|ಪ್ರೇಮಾ ಕೆ.ವಿ. ಸ್ವಾಗತಿಸಿದರು. ತರ್ಮೆಕ್ಸ್‌ ಲಿ.ನ ಪ್ರೊ|ಡಾ|ನಾಗೇಶ್‌ ಕಿಣಿ ದಿಕ್ಸೂಚಿ ಭಾಷಣ ಮಾಡಿದರು. ವಿಯೆಟ್ನಾಮ್‌, ಸ್ವಿಟ್ಸರ್‌ಲಂಡ್‌, ಬೆಲ್ಜಿಯಮ್‌, ದಕ್ಷಿಣ ಕೊರಿಯ, ತೈವಾನ್‌, ಶಾಂಘಾಯ್‌ನಿಂದ 20 ಪ್ರಬಂಧಗಳು ಮಂಡನೆಯಾದವು. ಕರ್ನಾಟಕ, ಮಹಾರಾಷ್ಟ್ರ, ಸಿಕ್ಕಿಂ, ತಮಿಳುನಾಡು, ಉತ್ತರಪ್ರದೇಶದಿಂದ 50 ಪ್ರಬಂಧಗಳು ಮಂಡನೆಯಾದವು.

Advertisement

Udayavani is now on Telegram. Click here to join our channel and stay updated with the latest news.

Next