Advertisement

ಬಾಂಗ್ಲಾದಲ್ಲಿ ಇಂದು ಮಧ್ಯಂತರ ಸರ್ಕಾರ ರಚನೆ… ಮೊಹಮ್ಮದ್‌ ಯೂನುಸ್‌ ನೇತೃತ್ವ

11:24 PM Aug 07, 2024 | Team Udayavani |

ಢಾಕಾ: ಬಾಂಗ್ಲಾದೇಶದಲ್ಲಿ ಅರಾಜಕತೆ ಮುಂದವರಿದಿರುವಂತೆಯೇ ಗುರುವಾರ (ಆ.8) ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್‌ ಯೂನುಸ್‌ ನೇತೃತ್ವದ 15 ಸದಸ್ಯರ ಸರ್ಕಾರ ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ಬಾಂಗ್ಲಾ ಸೇನಾ ಮುಖ್ಯಸ್ಥ ಜ. ವಕಾರ್‌-ಉಜ್‌-ಜಮಾನ್‌ ಹೇಳಿದ್ದಾರೆ. ಗುರು ವಾರ ರಾತ್ರಿ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಢಾಕಾ ದಾದ್ಯಂತ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದೆ.

Advertisement

ಹಸೀನಾ ಪಲಾಯನದ ಬೆನ್ನಲ್ಲೇ ಮಧ್ಯಂತರ ಸರ್ಕಾರ ರಚನೆಯ ಕುರಿತು ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ದೀನ್‌ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ವೇಳೆ ವಿದ್ಯಾರ್ಥಿ ಸಂಘಟನೆಗಳು ಮೊಹಮ್ಮದ್‌ ಯೂನುಸ್‌ಗೆ ದೇಶದ ಚುಕ್ಕಾಣಿ ನೀಡುವಂತೆ ಪಟ್ಟು ಹಿಡಿದಿದ್ದವು. ಅದರಂತೆ ಯೂನುಸ್‌ರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಶಹಬುದ್ದೀನ್‌ ನೇಮಿಸಿದ್ದಾರೆ. ಒಲಿಂಪಿಕ್ಸ್‌ ಹಿನ್ನೆಲೆಯಲ್ಲಿ ಪ್ಯಾರಿಸ್‌ಗೆ ತೆರಳಿದ್ದ ಯೂನುಸ್‌ ಈ ಜವಾಬ್ದಾರಿ ಹೊರಲು ಸಿದ್ಧರಾಗಿದ್ದು, ಬಾಂಗ್ಲಾದೇಶಕ್ಕೆ ಹಿಂದಿರುಗುತ್ತಿದ್ದಾರೆ. ಯೂನುಸ್‌ ಅವರಿಗೆ ಅಧಿಕಾರ ನೀಡುತ್ತಿರುವುದರ ಬಗ್ಗೆ ಬಾಂಗ್ಲಾ ಸೇನೆಯೂ ಸಹಮತ ವ್ಯಕ್ತಪಡಿಸಿದೆ.

ಶಾಂತಿ ಕಾಪಾಡಲು ಯೂನುಸ್‌ ಮನವಿ
ದೇಶವನ್ನು ಸಮಸ್ಯೆಗಳಿಂದ ಮುಕ್ತಗೊಳಿಸುವ ಗುರಿಯೊಂದಿಗೆ ಮಧ್ಯಂತರ ಸರ್ಕಾರ ರಚನೆಯಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ತಾಳ್ಮೆಯನ್ನು ವಹಿಸಬೇಕು ಎಂದು ಮೊಹಮ್ಮದ್‌ ಯೂನುಸ್‌ ಅವರು ಮನವಿ ಮಾಡಿದ್ದಾರೆ.

205 ಮಂದಿ ಕರೆ ತಂದ ಏರಿಂಡಿಯಾ ವಿಮಾನ
ಢಾಕಾದಲ್ಲಿ ತೊಂದರೆಗೆ ಒಳಗಾಗಿದ್ದ 205 ಮಂದಿಯನ್ನು ಏರ್‌ ಇಂಡಿಯಾದ ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆತರಲಾಗಿದೆ. ಭಾರತಕ್ಕೆ ಬಂದವರ ಪೈಕಿ 6 ಕೂಸುಗಳು ಮತ್ತು 199 ಪ್ರಯಾಣಿಕರು ಇದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next