Advertisement

ಆಗಸ್ಟ್‌ನಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ

10:46 PM May 12, 2019 | Lakshmi GovindaRaj |

ಕಾರವಾರ: “ರಾಜ್ಯ ಸರ್ಕಾರ ತಾನಾಗಿಯೇ ಬೀಳಲಿದೆ. ಅದಕ್ಕೆ ಯಾರೂ ದಿನಾಂಕ ನಿಗದಿ ಮಾಡುವುದು ಬೇಡ’ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ.

Advertisement

ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಅವಲೋಕನ ಸಭೆಯಲ್ಲಿ ಮಾತನಾಡಿ, “ಮೈತ್ರಿ ಸರ್ಕಾರದವರು ಯಾವಾಗ ನಿರ್ಧರಿಸುತ್ತಾರೋ ಆಗ ಅದು ಬೀಳಲಿದೆ. ಗ್ರಾಮ ಪಂಚಾಯತ್‌ ಚುನಾವಣೆ ಒಳಗೆ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಚುನಾವಣೆಗಳು ಮುಗಿದವು ಎಂದು ಆರಾಮಾಗಿ ಕಾಲ ಕಳೆಯಬೇಡಿ. ಮತ್ತೆ ವಿಧಾನಸಭಾ ಚುನಾವಣೆ ಶೀಘ್ರದಲ್ಲಿ ಬರಲಿದೆ. ಆಗಸ್ಟ್‌ ಒಳಗೆ ಸರ್ಕಾರ ಪತನವಾಗುವ ಸಾಧ್ಯತೆಗಳಿವೆ. ಇಚ್ಛಾಮರಣಿ ಸರ್ಕಾರ ತನ್ನದೇ ಆದ ಗತಿ ಪಡೆದುಕೊಂಡಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next