Advertisement

ಸ್ವಾರಸ್ಯ: ಶಾಸ್ತ್ರೀಜಿ ಮತ್ತು ಮಂಗಳವಾರ

04:29 PM May 05, 2020 | mahesh |

ನಮ್ಮ ದೇಶ ಕಂಡ ಧೀಮಂತ ನಾಯಕರಲ್ಲಿ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಕೂಡ ಒಬ್ಬರು. ಜೈ ಜವಾನ್‌, ಜೈ ಕಿಸಾನ್‌, ಜೈ ಹಿಂದ್‌ ಎಂಬ ಘೋಷವಾಕ್ಯ ಕೊಟ್ಟ ಮಹಾನ್‌ ನಾಯಕರು ಶಾಸ್ತ್ರೀಜಿ. ಅವರ ಬದುಕಿನ ಅತೀ ಮುಖ್ಯ ಘಟನೆಗಳು ನಡೆದದ್ದು ಮಂಗಳವಾರವೇ ಅನ್ನುವುದು ವಿಸ್ಮಯ ಅನ್ನಿಸುವ, ಆದರೆ ನಂಬಲೇ ಬೇಕಾದ ಸಂಗತಿ. ಹೇಗೆ ಅಂತೀರಾ? ಕೇಳಿ- ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಅವರು ಜನಿಸಿದ್ದು ಮಂಗಳವಾರ.

Advertisement

ಸ್ವಾತಂತ್ರ್ಯ ಸಂಗ್ರಾಮದ ಗಲಭೆಯಲ್ಲಿ (1940) ಅವರು ಬಂಧಿಸಲ್ಪಟ್ಟಿದ್ದು ಕೂಡ ಮಂಗಳವಾರ. ಮುಂದೆ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತ ದಿನ ಮಂಗಳವಾರವೇ ಆಗಿತ್ತು. ಕೇಂದ್ರ ಸಂಪುಟದಲ್ಲಿ ಅವರು, ಸಂಪರ್ಕ ಖಾತೆಯ ಸಚಿವರಾದದ್ದು (1947), ಕಾಂಗ್ರೆಸ್‌ನ ಅಧ್ಯಕ್ಷರಾದದ್ದೂ (1951) ಮಂಗಳವಾರವೇ. 1957ರಲ್ಲಿ ರೇಲ್ವೆ ಸಚಿವರಾದದ್ದು, ನಂತರ ಗೃಹ ಸಚಿವರಾದದ್ದು, ಮುಂದೊಮ್ಮೆ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಕೂಡ ಮಂಗಳವಾರವೇ. ಅಷ್ಟೇ ಅಲ್ಲ, ರಾಷ್ಟ್ರಪತಿ ಡಾ. ರಾಧಾಕೃಷ್ಣನ್‌ ಅವರು, ಶಾಸ್ತ್ರೀಜಿ ಅವರಿಗೆ “ಭಾರತ ರತ್ನ’ ಪುರಸ್ಕಾರ ನೀಡಿದ್ದೂ ಮಂಗಳವಾರವೇ! ಐತಿಹಾಸಿಕ ತಾಷ್ಕಂಟ್‌ ಒಪ್ಪಂದಕ್ಕೆ ಶಾಸ್ತ್ರೀ ಅವರು ಸಹಿ ಹಾಕಿದ್ದು ಕೂಡ ಮಂಗಳವಾರ. ಅವರು ಅಲ್ಲಿಯೇ ಇಹಲೋಕ ತ್ಯಜಿಸಿದ್ದು ಮಂಗಳ ವಾರವೇ…

Advertisement

Udayavani is now on Telegram. Click here to join our channel and stay updated with the latest news.

Next