Advertisement

ಕುತೂಹಲ ಕೆರಳಿಸಿದ ಶಾಸಕ ಸುಧಾಕರ್‌ ನಡೆ

01:33 AM Feb 07, 2019 | |

ಚಿಕ್ಕಬಳ್ಳಾಪುರ: ಮಂತ್ರಿ ಸ್ಥಾನ ಒಲಿಯದಿದ್ದಕ್ಕೆ ಹಾಗೂ ಕೊನೆ ಕ್ಷಣದಲ್ಲಿ ನಿಗಮ ಮಂಡಳಿ ಅಧ್ಯಕ್ಷರಾಗುವ ಅವಕಾಶ ಕೈ ತಪ್ಪಿದ್ದರಿಂದ ಸಿಎಂ ಕುಮಾರಸ್ವಾಮಿ ವಿರುದ್ದ ಬಹಿರಂಗವಾಗಿಯೇ ಆಕ್ರೋಶಗೊಂಡಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್‌, ಬೆಳಗಾವಿ ಅಧಿವೇಶನದ ರೀತಿ ಯಲ್ಲಿ ಇದೀಗ ಮೈತ್ರಿ ಸರ್ಕಾರದ ಮಹತ್ವದ ಬಜೆಟ್ ಅಧಿವೇಶನಕ್ಕೂ ಕೈ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿಯೂ ಬಜೆಟ್ ಅಧಿವೇಶನಕ್ಕೆ ತೆರಳುವ ಸಾಧ್ಯತೆಗ‌ಳು ಕಂಡು ಬರುತ್ತಿಲ್ಲ. ಹೀಗಾಗಿ, ಶಾಸಕ ಸುಧಾಕರ್‌ ರಾಜಕೀಯ ನಡೆ ಸಹಜವಾಗಿಯೆ ಕುತೂಹಲ ಕೆರಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next