Advertisement

ಸೋಂಕಿತರಿಗೆ ತಪ್ಪಿದ ಕಿರಿಕಿರಿ : ಎರಡೇ ಗಂಟೆಗಳೊಳಗೆ ವಿಮೆ ವ್ಯವಸ್ಥೆ

02:13 AM Apr 20, 2020 | Hari Prasad |

ನವದೆಹಲಿ: ಕೋವಿಡ್ ಸೋಂಕಿತರು ಆಸ್ಪತ್ರೆಗೆ ಸೇರಿರುವಾಗ, ವಿಮಾ ಕಂಪೆನಿಗಳು ಆಸ್ಪತ್ರೆಯಿಂದ ರಶೀದಿ ಲಭಿಸಿದ 2 ಗಂಟೆಗಳೊಳಗೆ ನಗದುರಹಿತ ಚಿಕಿತ್ಸೆ ಆರಂಭಿಸಲು ನೆರವಾಗಬೇಕು ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಆದೇಶಿಸಿದೆ.

Advertisement

ಆಸ್ಪತ್ರೆಯಿಂದ ಬಿಡುಗಡೆಯಾಗುವಾಗಲೂ ಅಷ್ಟೇ, ಅಂತಿಮ ಪಾವತಿ ಸಲ್ಲಿಕೆಯಾಗಿ, ಕೊನೆಯ ದಾಖಲೆಗಳು ಸಿಕ್ಕ ಎರಡು ಗಂಟೆಯೊಳಗೆ ಹೊರ ಹೊರಡಲು ಅನುಮತಿ ನೀಡಬೇಕು ಎಂದು ತಿಳಿಸಿದೆ.

ಈ ಬಗ್ಗೆ ಮಧ್ಯವರ್ತಿಗಳಿಗೂ ಸೂಚನೆ ನೀಡಬೇಕು ಎಂದು ನಿರ್ದೇಶನ ನೀಡಿದೆ. ಇದು ಕೋವಿಡ್ ರೋಗಿಗಳಿಗೆ ಯಾವುದೇ ಕಿರಿಕಿರಿಯಿಲ್ಲದೇ ನೆಮ್ಮದಿಯಿಂದ ಚಿಕಿತ್ಸೆ ಪಡೆಯಲು ನೆರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next