Advertisement

ಮೊಟ್ಟೆ ಬದಲು ತಾಯಿ ಕೈಗೆ ದುಡ್ಡು ಕೊಡಿ: ಶೋಭಾ

11:13 PM Dec 10, 2021 | Team Udayavani |

ಚಿಕ್ಕಮಗಳೂರು: ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಮೊಟ್ಟೆ ನೀಡುವ ಪ್ರಕ್ರಿಯೆಗೆ ವಿರೋಧ ವ್ಯಕ್ತವಾಗುತ್ತಿದೆ. ಮೊಟ್ಟೆ ಬದಲು ಮಕ್ಕಳ ತಾಯಿ ಕೈಗೆ ದುಡ್ಡು ಕೊಡುವುದು ಒಳ್ಳೆಯದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಮೂಡಿಗೆರೆ ತಾಲೂಕಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾಯಿ ಗಿಂತ ಚೆನ್ನಾಗಿ ಮಕ್ಕಳನ್ನು ನೋಡಿ ಕೊಳ್ಳುವವರು ಯಾರೂ ಇಲ್ಲ. ಮಕ್ಕಳ ಆಹಾರದ ವಿಚಾರ ತಾಯಿಗೆ ಬಿಡಬೇಕು. ಮೊಟ್ಟೆ ಬದಲು ದುಡ್ಡು ಕೊಟ್ಟರೆ ಒಳ್ಳೆಯದು ಎಂದರು.

ಇದನ್ನೂ ಓದಿ:ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ ನಿರ್ಬಂಧ

ಆಹಾರ ಪದ್ಧತಿ ಅವರವರ ಆಯ್ಕೆ. ಒತ್ತಡ ಹೇರುವುದು ಸರಿಯಲ್ಲ. ಸರಕಾರದ ಮೇಲೆ ಯಾವುದೇ ವ್ಯಕ್ತಿ ಒತ್ತಡ ತಂದು ಬದಲಾಯಿಸಲು ಆಗುವುದಿಲ್ಲ, ಮೊಟ್ಟೆ ಕೊಡುವುದರಿಂದ ಕೆಲವರಿಗೆ ನೋವಾಗಲಿದೆ ಎನ್ನುವುದಾದರೆ ಸರಕಾರ ಮರು ಪರಿಶೀಲನೆ ಮಾಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next