Advertisement
ತಕ್ಷಣವೇ ಕಿರಿದಾದ ಚರಂಡಿಯನ್ನು ಜೆಸಿಬಿ ಮುಖಾಂತರ ರಸ್ತೆಯನ್ನು ಅಗೆದು ಅಗಲಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾದರು. ಅಲ್ಲದೆ ಪೌರಕಾರ್ಮಿಕರು ಚರಂಡಿಗಳಲ್ಲಿನ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗುವಂತೆ ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಅವರಿಗೆ ಆದೇಶಿಸಿದರು. ಮನೆಗಳಿಗೆ ನೀರು ನುಗ್ಗದಂತೆ ನಗರದ ಎಲ್ಲ ಚರಂಡಿಗಳಲ್ಲಿನ ಹೂಳು ಮತ್ತು ತ್ಯಾಜ್ಯವನ್ನು ತೆಗೆಯಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತದೆ.
ಕಸಾಪ ಅಧ್ಯಕ್ಷರ ಆಕ್ರೋಶ: ರಾತ್ರಿ ಜೆಸಿಬಿಯಿಂದ ರಸ್ತೆಯನ್ನು ಅಗೆದ ಪರಿಣಾಮ ದೊಡ್ಡ ಗುಂಡಿ ನಿರ್ಮಾಣವಾಗಿದೆ. ಅಲ್ಲದೆ ಕುಡಿಯುವ ನೀರಿನ ಪೈಪ್ ಒಡೆದ ಪರಿಣಾಮ ಮತ್ತಷ್ಟು ರಸ್ತೆಯನ್ನು ತೋಡಿ ಅಗಲಗೊಳಿಸಿದ್ದಾರೆ. ಗುಂಡಿಯ ಸುತ್ತಲೂ ಸುರಕ್ಷತೆಯ ಯಾವುದೇ ಪರಿಕರಗಳನ್ನು ಅಳವಡಿಸಿಲ್ಲ. ಇದರಿಂದ ನಾನು ಜಾರಿ ಬಿದ್ದಿದ್ದೇನೆ ಎಂದು ಕಸಾಪ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.