Advertisement

ಅನಧಿಕೃತ ಅಂಗಡಿ ತೆರವಿಗೆ ಒತ್ತಾಯ

04:55 PM Mar 30, 2022 | Team Udayavani |

ಮಾನ್ವಿ: ಪಟ್ಟಣದಲ್ಲಿ ರಸ್ತೆ ಅತಿಕ್ರಮಿಸಿ ನಿರ್ಮಿಸಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ತ್ರಿಚಕ್ರ ವಾಹನ ಚಾಲಕರ ಸಂಘದ ತಾಲೂಕು ಸಮಿತಿ ಸಂಚಾಲಕ ರಮೇಶ ಒತ್ತಾಯಿಸಿದರು.

Advertisement

ಪಟ್ಟಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಪಟ್ಟಣದ ಬಸ್‌ ನಿಲ್ದಾಣದ ಹತ್ತಿರದ ಪಂಪಾ ಉದ್ಯಾನವನದ ಸುತ್ತಮುತ್ತ ಅನಧಿಕೃತವಾಗಿ ಡಬ್ಟಾ ಅಂಗಡಿಗಳನ್ನು ರಸ್ತೆ ಮೇಲೆ ನಿರ್ಮಿಸಲಾಗಿದೆ. ಇದರಿಂದ ರಸ್ತೆಯಲ್ಲಿ ಪ್ರತಿನಿತ್ಯ ವಾಣಿಜ್ಯ ಅಂಗಡಿಗಳಿಗೆ ಸಾಮಾನು ಸಾಗಿಸುವ ಹಾಗೂ ಲಾರಿ, ಆಟೋಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಸ್ಥಳ ಪರಿಶೀಲಿಸಿ ಕೂಡಲೇ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ವೇಳೆ ಬಿಜೆಪಿ ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶ್ರೀಕಾಂತ ಪಾಟೀಲ ಗೂಳಿ, ಸಂಚಾಲಕರಾದ ಹನುಮಯ್ಯ, ರುದ್ರಸ್ವಾಮಿ, ಅಯ್ಯಪ್ಪ ನಾಯಕ, ನರಸಪ್ಪ, ತಿಮ್ಮರಾಜ ನಾಯಕ, ಗಂಗಾಧರ, ಬಂದೇನವಾಜ, ವೀರೇಶ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next