Advertisement

ಸಮರ್ಪಕ ನೀರು ಪೂರೈಕೆಗೆ ಒತ್ತಾಯ

02:52 PM Nov 01, 2019 | Team Udayavani |

ಹನುಮಸಾಗರ: ಸಮರ್ಪಕವಾಗಿ ನೀರು ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿ 4 ಮತ್ತು 8ನೇ ವಾರ್ಡ್‌ನ ನಿವಾಸಿಗಳು ಗ್ರಾಪಂಗೆ ಮುತ್ತಿಗೆ ಹಾಕಿ ಪಿಡಿಒ, ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ವಾಗ್ವಾದ ನಡೆಸಿದರು.

Advertisement

ನಮ್ಮ ವಾರ್ಡ್‌ಗೆ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ. ಈ ಬಗ್ಗೆ ನೀವುಗಳು ಗಮನ ಹರಿಸುತ್ತಿಲ್ಲ. ಗ್ರಾಪಂನಲ್ಲಿ ಕುಳಿತುಕೊಂಡು ಏನುಮಾಡುತ್ತಿರಿ ಎಂದು ಗ್ರಾಪಂ ಅಧ್ಯಕ್ಷರು, ಸದಸ್ಯರನ್ನು ತರಾಟೆ ತೆಗೆದುಕೊಂಡರು. ಕೆಲಕಾಲ ಅಧ್ಯಕ್ಷರು, ಪಿಡಿಒ, ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮುತ್ತಪ್ಪ ಕಬ್ಬರಗಿ, ಚಂದುಸಾಬ್‌ ನದಾಫ, ಶಿವಪ್ಪ ಹೂಗಾರ, ಕಳಕಪ್ಪ ಹೂಗಾರ, ಶಂಕ್ರಪ್ಪ ಹೂಗಾರ, ಚಂದಪ್ಪ ಹೂಗಾರ, ಯಮನಪ್ಪ ಹೂಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next