Advertisement

ಗರಿಕೆಮಠ: ಚಿರತೆ ದಾಳಿಯಿಂದ ಹಸುವಿಗೆ ಗಾಯ; ಚಿರತೆ ಸೆರೆಗೆ ಆಗ್ರಹ

06:34 PM Mar 28, 2019 | Sriram |

ಕೋಟ: ಗರಿಕೆಮಠ ಸಮೀಪ ಸೆಣಗಲ್ಲಿನಲ್ಲಿ ಹಲವು ಸಮಯದಿಂದ ಚಿರತೆ ಕಾಟ ತೀವ್ರವಾಗಿದ್ದು, ಈ ಭಾಗದ ಹಲವಾರು ನಾಯಿಗಳು ಚಿರತೆಗೆ ಆಹಾರವಾಗುವುದರ ಜತೆಗೆ ಜಾನುವಾರುಗಳಿಗೂ ಸಮಸ್ಯೆಯಾಗುತ್ತಿದೆ.ಬುಧವಾರ ಇಲ್ಲಿನ ಗಿರಿಜಾ ಪೂಜಾರಿ¤ ಎನ್ನುವವರ ಮೇಯಲು ಬಿಟ್ಟ ಹಸುವಿನ ಮೇಲೆ ಚಿರತೆ ದಾಳಿ ನಡೆಸಿದ್ದು ಅದೃಷ್ಟವಶಾತ್‌ ಹಸು ಪ್ರಾಣಾಪಾಯದಿಂದ ಪಾರಾಗಿ ಮನೆ ಸೇರಿದೆ. ಆದರೆ ಈ ಸಂದರ್ಭ ತೀವ್ರವಾದ ಗಾಯವಾಗಿದೆ.

Advertisement

ಇದೀಗ ಚಿರತೆ ಕಾಟದಿಂದಾಗಿ ಸಂಜೆಯ ಅನಂತರ ಇಲ್ಲಿನ ನಿವಾಸಿಗಳು ರಾತ್ರಿ ಓಡಾಡುವುದಕ್ಕೆ  ಭಯಪಡುತ್ತಿದ್ದರು.ಅರಣ್ಯಾಧಿಕಾರಿಗಳ ಭೇಟಿ  ಸ್ಥಳೀಯರ ದೂರಿನ ಮೇರೆಗೆ ಬ್ರಹ್ಮಾವರ ಅರಣ್ಯಾಧಿಕಾರಿ ಜೀವನ್‌ ಶೆಟ್ಟಿ ಹಾಗೂ ಸಿಬಂದಿ ಶಿವಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಚಿರತೆ ಸೆರೆ ಹಿಡಿಯುವ ಸಲುವಾಗಿ ಬೋನು ಅಳವಡಿಸುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಸಮರ್ಪಕ ಕ್ರಮ
ಕೈಗೊಳ್ಳಬೇಕು ಎಂದು ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next