Advertisement

ಸೋಂಕಿತರಿಗೆ ಸಿಗುತ್ತಿಲ್ಲ ಸಮರ್ಪಕ ಮಾಹಿತಿ

02:56 PM Jul 27, 2020 | Suhan S |

ರಾಯಚೂರು: ಕೋವಿಡ್ ವೈರಸ್‌ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದ್ದರೆ, ಮತ್ತೂಂದೆಡೆ ಜಿಲ್ಲೆಯಲ್ಲಿ ಸೋಂಕಿತರಿಗೆ ಸೂಕ್ತ ಮಾಹಿತಿಯನ್ನೇ ನೀಡದಿರುವಂಥ ಪ್ರಕರಣಗಳು ನಡೆದಿವೆ.

Advertisement

ಆಸ್ಪತ್ರೆಗೆ ದಾಖಲಾದವರು ಮೃತಪಟ್ಟರೆ ಕೋವಿಡ್‌-19 ದೃಢಪಟ್ಟಿದೆ ಎಂದು ಜಿಲ್ಲಾಡಳಿತವೇ ಅಂತಿಮ ಸಂಸ್ಕಾರ ನೆರವೇರಿಸುತ್ತಿದೆ. ಆದರೆ, ಅವರ ಕುಟುಂಬದವರನ್ನು ಪರೀಕ್ಷೆ ಕೂಡ ಮಾಡುತ್ತಿಲ್ಲ. ಇನ್ನು ಪರೀಕ್ಷೆ ಮಾಡಿದ ವರದಿಗಳು ಬಂದ ಮೇಲೆ ಸೋಂಕು ದೃಢಪಟ್ಟಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಿ ಮಾಹಿತಿ ಕೂಡ ನೀಡಿಲ್ಲ. ರೋಗ ಲಕ್ಷಣಗಳಿಲ್ಲದಿದ್ದಲ್ಲಿ ಕನಿಷ್ಠ ಪಕ್ಷ ಹೋಮ್‌ ಕ್ವಾರಂಟೈನ್‌ಗಾದರೂ ಒಳಪಡುವಂತೆ ತಿಳಿಸುತ್ತಿಲ್ಲ.

ಈಚೆಗೆ ನಗರದ ನಿವೃತ್ತ ಸೈನಿಕರೊಬ್ಬರು ಮೃತಪಟ್ಟಿದ್ದು, ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸದೆ ಜಿಲ್ಲಾಡಳಿತವೇ ಅಂತಿಮ ಸಂಸ್ಕಾರ ನೆರವೇರಿಸಿತ್ತು. ನಮ್ಮ ತಂದೆ ಬೇರೆ ರೋಗಗಳಿಂದ ಬಳಲುತ್ತಿದ್ದು, ಕೋವಿಡ್‌ -19 ದೃಢಪಟ್ಟಿರುವ ಬಗ್ಗೆ ದಾಖಲೆ ನೀಡುವಂತೆ ಕೇಳಿದರೂ ಯಾರೂ ಸ್ಪಂದಿಸಿಲ್ಲ. ಅದಾದ ಬಳಿಕ ಕುಟುಂಬ ಸದಸ್ಯರು ಸ್ವಪ್ರೇರಣೆಯಿಂದ ಕ್ವಾರಂಟೈನ್‌ ಗೆ ಒಳಗಾದರೂ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿಲ್ಲ. ನಮಗೆ ಸೋಂಕು ತಗುಲಿದೆಯಾ ಎಂದು ಪರೀಕ್ಷೆ ಕೂಡ ಮಾಡಿಲ್ಲ ಎಂದು ದೂರುತ್ತಾರೆ ಕುಟುಂಬ ಸದಸ್ಯರು.

ಇನ್ನು ಸಿಯಾತಲಾಬ್‌ ಬಡಾವಣೆಯಲ್ಲಿ ಇಡೀ ಕುಟುಂಬಕ್ಕೆ ಕೋವಿಡ್ ಸೋಂಕು ತಗುಲಿದೆ. ಪರೀಕ್ಷೆ ಮಾಡಿಸಿಕೊಂಡ ಬಳಿಕ ವರದಿ ಬಂದರೂ ಅದನ್ನು ಕುಟುಂಬ ಸದಸ್ಯರಿಗೆ ತಿಳಿಸಿಲ್ಲ. ಕೊನೆಗೆ ಅವರೇ ಖುದ್ದು ಹೋಗಿ ವಿಚಾರಿಸಿದಾಗಲೇ ನಿಮ್ಮ ವರದಿ ಪಾಸಿಟಿವ್‌ ಬಂದಿದೆ. ಹೇಗಿದ್ದರೂ 8-10 ದಿನಗಳಾಗಿದೆ. ಇನ್ನೂ ನಾಲ್ಕೈದು ದಿನ ಮನೆಯಲ್ಲಿ ಕ್ವಾರಂಟೈನ್‌ ಇರುವಂತೆ ತಿಳಿಸಲಾಗಿದೆ.

ಸಂಪರ್ಕದಿಂದ ಸೋಂಕು: ಐದು ದಿನಗಳಿಂದ ಜಿಲ್ಲೆಯಲ್ಲಿ ನಿತ್ಯ 100ಕ್ಕೂ ಮೀರಿಯೇ ಪಾಸಿಟಿವ್‌ ಪ್ರಕರಣಗಳು ದೃಢಪಡುತ್ತಿವೆ. ಈ ಪೈಕಿ ಕೆಲವೊಂದು ಸಾರಿ, ಐಎಲ್‌ಐ ಪ್ರಕರಣಗಳಾದರೆ ಬಹುತೇಕ ಪ್ರಕರಣಗಳು ಸಂಪರ್ಕದಿಂದಲೇ ಹರಡುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಿರುವುದರ ಹಿಂದೆ ಆರೋಗ್ಯ ಇಲಾಖೆ ವೈಫಲ್ಯ ಕಂಡು ಬರುತ್ತಿದೆ.

Advertisement

ನಮ್ಮ ಕುಟುಂಬದ ಸದಸ್ಯರ ಪರೀಕ್ಷೆ ಮಾಡಲಾಗಿತ್ತು. ಆದರೆ, ಪಾಸಿಟಿವ್‌ ಬಂದಿರುವ ವಿಚಾರ ನಮಗೇ ತಿಳಿದಿಲ್ಲ. ವಾರದ ಬಳಿಕ ಹೋಗಿ ವಿಚಾರಿಸಿದರೆ ನಿಮ್ಮ ಕುಟುಂಬ ಸದಸ್ಯರಿಗೆ ಪಾಸಿಟಿವ್‌ ಇದೆ. ನೀವು ಕ್ವಾರಂಟೈನ್‌ನಲ್ಲೇ ಇರಬೇಕು ಎಂದು ತಿಳಿಸಿದ್ದಾರೆ. ಕನಿಷ್ಠ ಪಕ್ಷ ಪಾಸಿಟಿವ್‌ ಬಂದಿರುವ ವರದಿ ನೀಡುವಂತೆ ಕೇಳಿದರೂ ಸರಿಯಾಗಿ ಸ್ಪಂದಿಸಲಿಲ್ಲ. -ಕೋವಿಡ್ ವೈರಸ್‌ ಸೋಂಕಿತ ಕುಟುಂಬ ಸದಸ್ಯ

ನಮ್ಮ ತಂದೆಯವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿಯೇ ಮೃತಪಟ್ಟರು. ಬಳಿಕ ಕೋವಿಡ್‌-19 ದೃಢಪಟ್ಟಿದೆ. ಶವ ನೀಡುವುದಿಲ್ಲ ಎಂದು ಜಿಲ್ಲಾಡಳಿತವೇ ಅಂತಿಮ ಸಂಸ್ಕಾರ ನೆರವೇರಿಸಿತು. ನಮ್ಮ ತಂದೆ ಜತೆ ಇದ್ದ

ನಮಗೂ ಸೋಂಕು ತಗುಲಿರುವ ಸಾಧ್ಯತೆ ಇದ್ದರೂ ಆರೋಗ್ಯ ಇಲಾಖೆ ಸಿಬ್ಬಂದಿ ನಮ್ಮನ್ನು ಪರೀಕ್ಷೆ ಕೂಡ ಮಾಡಲಿಲ್ಲ. ಇದರಿಂದ ನಾವೇ ಸ್ವ ಪ್ರೇರಣೆಯಿಂದ ಕ್ವಾರಂಟೈನ್‌ಗೆ ಒಳಗಾದೆವು. -ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಪುತ್ರ

Advertisement

Udayavani is now on Telegram. Click here to join our channel and stay updated with the latest news.

Next