Advertisement

ಪ್ರತ್ಯೇಕಗೊಂಡ ಚಡಚಣ ತಾಪಂ ಸದಸ್ಯರಿಗೆ ಸನ್ಮಾನ

05:09 PM Feb 21, 2020 | Naveen |

ಇಂಡಿ: ತಾಲೂಕು ಪಂಚಾಯತ್‌ ಸಭಾಭವನದಲ್ಲಿ ತಾಪಂ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ ಅಧ್ಯಕ್ಷತೆಯಲ್ಲಿ 16ನೇ ಸಾಮಾನ್ಯ ಸಭೆ ಗುರುವಾರ ನಡೆಯಿತು.

Advertisement

ಈ ಸಭೆಯಲ್ಲಿ ತಾಲೂಕು ಪಂಚಾಯತ್‌ ಯೋಜನಾಧಿಕಾರಿ ವ್ಹಿ.ಎ. ಹಳ್ಳಿಕರ ಅವರು ಹಿಂದಿನ ಸಭೆಯ ನಡಾವಳಿ ಮಂಡಿಸಿದರು.
ನಂತರ ತಾಪಂ ಸದಸ್ಯ ಸಿದ್ದಪ್ಪ ತಳವಾರ ಮಾತನಾಡಿ, ಕಾಲುವೆ 18, 19 ಡಿಸ್ಟ್ರೀಬಿಟರ್‌ ವರೆಗೆ ನೀರು ಬಿಡುತ್ತಿದ್ದು, 20ನೇ ಡಿಸ್ಟ್ರಿಬ್ಯುಟರ್‌ ನೀರು ಬರುತ್ತಿಲ್ಲ. ಅಧಿ ಕಾರಿಗಳು ನಿರಾಶಕ್ತಿ ತೋರುತ್ತಿದ್ದಾರೆ ಎಂದು ದೂರಿದರು.

ತಾಪಂ ಸದಸ್ಯ ಗಣಪತಿ ಬಾಣಿಕೋಲ ಮಾತನಾಡಿ, ಎಸ್‌ಸಿ ಪಿ, ಟಿ.ಎಸ್‌ಪಿ ಯಿಂದ ಬಡವರು ತಮ್ಮ ಜಮೀನುಗಳಲ್ಲಿ ಬಾವಿ ತೋಡಿದ್ದಾರೆ. ಆದರೆ ಇದರ ಅನುದಾನ ಕೇಳಿದರೆ ಹಿಂದೆ ಇದ್ದ ಅಧಿಕಾರಿ ವರ್ಗಾಣೆಗೊಂಡಿದ್ದಾರೆ ಎಂದು ಹೇಳುತ್ತಾರೆ. ಅವರ ಹೆಸರನ್ನೆ ಹೇಳುತ್ತಾ ದಿನಾ ಕಳೆಯುತ್ತಿದ್ದಾರೆ. ಹೀಗಾದರೆ ಮುಗ್ಧ
ಜನರ ಪಾಡು ಕೇಳುವರು ಯಾರು? ಎಂದು ಪ್ರಶ್ನಿಸಿದರು.

ತಾಲೂಕಿನಲ್ಲಿ ಸರಕಾರದ ಗೋಮಾಳ ಸೇರಿದಂತೆ ಸರಕಾರದ ಜಮೀನುಗಳು ಎಷ್ಟಿದೆ ಎಂಬುದನ್ನು ಅಂಕಿ-ಸಂಖ್ಯೆ ಒದಗಿಸಬೇಕು. ಹಳ್ಳಿಗಳಲ್ಲಿ ವಿವಿಧ ಸಮುದಾಯದ ಜನರಿಗೆ ಸ್ಮಶಾನ ರುದ್ರಭೂಮಿ ಇಲ್ಲ ಎಂದು ನೂತನ ತಾಪಂ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ ಅಧಿಕಾರಿಗಳಿಗೆ ಸೂಚಿಸಿದರು.

ಬೇಸಿಗೆ ಬಂದಿರುವುದರಿಂದ ಕೆಲ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಡವಿ ವಸ್ತಿಗಳಲ್ಲಿ ನೀರಿನ ಸಮಸ್ಯೆ ಇದೆ. ಸರಕಾರದ ಅನುದಾನ ಬಂದ ನಂತರ ಎಂದು ಅಧಿಕಾರಿಗಳು ಹೇಳಿದರೆ ಅಲ್ಲಿಯವರೆಗೆ ಜನರು ಜೀವನ ಸಾಗಿಸುವುದು ಹೇಗೆ? ಜನರು ನಮಗೆ ಛೀಮಾರಿ ಹಾಕುತ್ತಾರೆ. ನೀವು ಏನುಬೇಕಾದರೂ ಮಾಡಿ. ಮೊದಲು ನೀರು ಕೊಡಿ ಎಂದು ಸದಸ್ಯ ಸಿದ್ದಪ್ಪ ತಳವಾರ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಸರಕಾರದ ಅನುದಾನ ಬಂದ ನಂತರ ಅಡವಿ ವಸ್ತಿಗಳ ನೀರಿನ ಸಮಸ್ಯೆ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಅಧಿಕಾರಿ ಎಸ್‌. ಆರ್‌. ರುದ್ರವಾಡಿ ಉತ್ತರಿಸಿದರು. ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಎಸ್‌. ಎಸ್‌.ಕತ್ತಿ, ಶಿಕ್ಷಣಾ ಧಿಕಾರಿ ವಸಂತ ರಾಠೊಡ, ಅರಣ್ಯಾಧಿಕಾರಿ ಚವ್ಹಾಣ, ಚಡಚಣ ಬಿಇಒ ಆಲಗೂರ, ಹೆಸ್ಕಾಂ ಇಇ ಮೇಡೆದಾರ, ಡಾ| ಅರ್ಚನಾ ಕುಲಕರ್ಣಿ, ಕ್ರೀಡಾಧಿಕಾರಿ ಚವ್ಹಾಣ ಸೇರಿದಂತೆ ತಾಲೂಕು ಅಧಿಕಾರಿಗಳು, ತಾಪಂ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next