Advertisement

ಇನ್ನೂ ಆರಂಭವಾಗದ ಇಂದಿರಾ ಕ್ಯಾಂಟೀನ್‌

03:07 PM Aug 19, 2019 | Suhan S |

ಯಲ್ಲಾಪುರ: ಪಟ್ಟಣದ ಬೆಲ್ ರಸ್ತೆಯ ಪಕ್ಕ ತಾಲೂಕು ಪಂಚಾಯತ್‌ ವಸತಿ ಗೃಹದ ಆವಾರದಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್‌ ವರ್ಷ ಕಳೆದರೂ ಇನ್ನೂ ಆರಂಭವಾಗಿಲ್ಲ.

Advertisement

ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾಗ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಪ್ರತಿ ತಾಲೂಕಿನಲ್ಲಿ ನಿರ್ಮಿಸಬೇಕೆನ್ನುವ ಹಿನ್ನೆಲೆಯಲ್ಲಿ ಇಲ್ಲಿಯೂ ನಿರ್ಮಿಸಲಾಗಿದೆ.

ಮುಂಡಗೋಡಕ್ಕೆ ಸಿ.ಎಂ. ಬಂದಾಗ ಹಲವು ಯೋಜನೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಯಲ್ಲಾಪುರದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸುವ ಬಗ್ಗೆ ರಿಮೋಟ್ ಅದುಮಿ ಗುದ್ದಲಿಪೂಜೆ ನೆರವೇರಿಸಿದ್ದರು. ನಂತರ ಶಾಸಕ ಶಿವರಾಮ ಹೆಬ್ಟಾರ ಪಟ್ಟಣದ ನೂತನ ತರಕಾರಿ ಮಾರುಕಟ್ಟೆಯ ಪ್ರಾಂಗಣದಲ್ಲಿ ಇದೇ ಯೋಜನೆ ಕಾಮಗಾರಿಗೆ ಗುದ್ದಲಿಪೂಜೆ ಮಾಡಿದರು.

ಕೆಲ ತಿಂಗಳ ಬಳಿಕ ಇದೇ ಕಾಮಗಾರಿಗೆ ತಾ.ಪಂ. ವವತಿಗೃಹದ ಆವಾರದಲ್ಲಿ ಶಾಸಕ ಶಿವರಾಮ ಹೆಬ್ಟಾರ ಮೂರನೇಯ ಬಾರಿ ಗುದ್ದಲಿಪೂಜೆ ನೆರವೇರಿಸಿದರು.

ಇಲ್ಲಿ ಕಮಗಾರಿ ಆರಂಭಗೊಂಡು ಕಟ್ಟಡವೂ ನಿರ್ಮಾಣ ಆಗಿದ್ದೇನೋ ನಿಜ, ಆದರೆ ಇನ್ನೂ ಉದ್ಘಾಟನೆಯಾಗಿಲ್ಲ. ಇಂದಿರಾ ಕ್ಯಾಂಟೀನ್‌ ಆರಂಭವಾಗುವ ಮುನ್ಸೂಚನೆ ಕಾಣುತ್ತಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next