Advertisement

ಲಂಕಾ ತಂಡಕ್ಕೆ ಕೋವಿಡ್ ಕಾಟ: ಭಾರತ-ಶ್ರೀಲಂಕಾ ಸರಣಿ ಮುಂದೂಡಿಕೆ

01:56 PM Jul 10, 2021 | Team Udayavani |

ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ ತಂಡದಲ್ಲಿ ಮತ್ತೂಂದು ಕೋವಿಡ್ ಪ್ರಕರಣ ಕಂಡು ಬಂದಿದೆ. ತಂಡದ ಅಂಕಿಸಂಖ್ಯೆ ವಿಶ್ಲೇಷಕ ಜಿ.ಟಿ. ನಿರೋಶನ್‌ ಅವರಿಗೆ ಕೊರೊನಾ ತಗುಲಿರುವುದಾಗಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಶುಕ್ರವಾರ ತಿಳಿಸಿದೆ. ಇದರ ಪರಿಣಾಮ ಭಾರತ-ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿ ಮುಂದೂಡಿಕೆಯಾಗಿದೆ.

Advertisement

ಜುಲೈ 13ಕ್ಕೆ ಆರಂಭವಾಗಬೇಕಿದ್ದ ಮೊದಲ ಏಕದಿನ ಪಂದ್ಯ ಜುಲೈ 18ರಂದು ನಡೆಯಲಿದೆ. ಗುರುವಾರ ಲಂಕಾ ತಂಡದ ಬ್ಯಾಟಿಂಗ್‌ ಕೋಚ್‌, ಜಿಂಬಾಬ್ವೆಯ ಗ್ರ್ಯಾಂಟ್‌ ಫ್ಲವರ್‌ ಅವರಿಗೆ ಸೋಂಕು ದೃಢ ಪಟ್ಟಿತ್ತು. ತಂಡ ಇಂಗ್ಲೆಂಡ್‌ನಿಂದ ಆಗಮಿಸಿದ ಬಳಿಕ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಅದರ ಬೆನ್ನಲ್ಲೇ ಈ ಪ್ರಕರಣ ನಡೆದಿರುವುದು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ.

ಇದನ್ನೂ ಓದಿ:ಹರ್ಮನ್ ಬಳಗಕ್ಕೆ ವರುಣನ ಕಾಟ: ಡಿಎಲ್ ನಿಯಮದಡಿ ಗೆದ್ದ ಇಂಗ್ಲೆಂಡ್ ವನಿತೆಯರು

ಈ ನಡುವೆ ಇಂಗ್ಲೆಂಡ್‌ನ‌ಲ್ಲಿ ಕೊರೊನಾ ನಿಯಮಾವಳಿಯನ್ನು ಉಲ್ಲಂ ಸಿ ಸುತ್ತಾಟ ನಡೆಸಿ ನಿಷೇಧಕ್ಕೊಳಗಾಗಿರುವ ಮೂವರು ಲಂಕಾ ಕ್ರಿಕೆಟಿಗರ ವಿಚಾರಣೆಗಾಗಿ ತನಿಖಾ ತಂಡವೊಂದನ್ನು ರಚಿಸಲಾಗಿದೆ. ಜು.13ರಿಂದ ಭಾರತ- ಲಂಕಾ ನಡುವೆ 3 ಏಕದಿನ, 3 ಟಿ20 ಪಂದ್ಯಗಳನ್ನು ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next