Advertisement

ಭಾರತ ವಿಶ್ವಕಪ್‌ನಿಂದ ಹೊರಬೀಳಲು ಕಾರಣಗಳು ಒಂದೆರಡಲ್ಲ !

12:00 AM Nov 08, 2021 | Team Udayavani |

ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ಥಾನದ ವಿರುದ್ಧ ಸೋತಾಗಲೇ ಸೆಮಿಫೈನಲ್‌ ತಲುಪುವುದು ಕಷ್ಟ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದರು. ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಸೋತಾಗಲಂತೂ ಬಾಗಿಲು ಬಂದ್‌ ಎನ್ನುವುದು ಸ್ಪಷ್ಟವಾಗಿತ್ತು. ಆದರೆ ರವಿವಾರ ಒಂದು ಸಣ್ಣ ಆಸೆಯಿತ್ತು. ಅದು ಅಫ್ಘಾನಿಸ್ಥಾನದ ವಿರುದ್ಧ ನ್ಯೂಜಿಲ್ಯಾಂಡ್‌ ಸೋಲುವುದು. ಹಾಗಾದರೆ ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ತಲಾ 3 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಸರಿಸಮನಾಗು ತ್ತವೆ (ಸೋಮವಾರ ನಮೀಬಿಯ ವಿರುದ್ಧ ಭಾರತ ಗೆದ್ದರೆ). ಈಗ ರನ್‌ರೇಟ್‌ ಉತ್ತಮಗೊಳಿಸಿಕೊಂಡರೆ ಭಾರತ, ನ್ಯೂಜಿಲ್ಯಾಂಡನ್ನು ಕೆಳಕ್ಕೆ ತಳ್ಳಿ ಮೇಲೇರಬಹುದೆನ್ನುವುದು ಒಂದು ಕಷ್ಟದ ಲೆಕ್ಕಾಚಾರ. ಆದರೆ ಅಷ್ಟೆಲ್ಲ ಲೆಕ್ಕಾಚಾರಗಳ ಆವಶ್ಯಕತೆಯೇ ಈಗಿಲ್ಲ. ರವಿವಾರ ನ್ಯೂಜಿಲ್ಯಾಂಡ್‌ ಗೆದ್ದು ಸೆಮಿಫೈನಲ್‌ಗೇರಿದೆ, ಭಾರತ ಹೊರಬಿದ್ದಿದೆ. ಹಾಗಾಗಿ ಸೋಮವಾರ ನಮೀಬಿಯ ವಿರುದ್ಧದ ಪಂದ್ಯ ಭಾರತ ಪಾಲಿಗೆ ಲೆಕ್ಕಭರ್ತಿಗೆ ಮಾತ್ರ.

Advertisement

ಈಗಾಗಲೇ ಕೂಟದಿಂದ ಭಾರತ ಹೊರಬಿದ್ದಿರುವುದರಿಂದ ಟಿವಿ ಆದಾ ಯಕ್ಕೆ ಹೊಡೆತ ಬೀಳುವುದು ಖಚಿತ. ಭಾರತದಲ್ಲೇ ಗರಿಷ್ಠ ವೀಕ್ಷಕರಿರು ವುದರಿಂದ ಭಾರತ ಕಣದಲ್ಲಿದ್ದರೆ ಜಾಹೀರಾತುದಾರರಿಗೆ ಹಾಕಿದ ಹಣ ವಾಪಸ್‌ ಬರುತ್ತದೆನ್ನುವ ನಂಬಿಕೆಯಿರುತ್ತದೆ. ಈಗ ತಲೆಬಿಸಿ ಶುರುವಾಗಿದೆ. ಅವೆಲ್ಲ ಲೆಕ್ಕಾಚಾರಗಳನ್ನು ಬದಿಗಿಟ್ಟು ನೋಡು ವುದಾದರೆ ಭಾರತಕ್ಕೆ ಇಂತಹ ಪರಿಸ್ಥಿತಿ ಬಂದಿದ್ದೇಕೆ? ಅದರಲ್ಲೂ ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಐಸಿಸಿ ಕೂಟವೊಂದನ್ನು ಯಾಕೆ ಗೆಲ್ಲಲು ಆಗಿಲ್ಲ? ಇದು ಬಹಳ ಮುಖ್ಯ ಪ್ರಶ್ನೆ.

ಈ ಬಾರಿ ಬೌಲಿಂಗ್‌ಗೆ ಗರಿಷ್ಠ ಬೆಂಬಲ ನೀಡುವ ದುಬಾೖಯಲ್ಲೇ ಭಾರತ ನಾಲ್ಕು ಪಂದ್ಯಗಳನ್ನಾಡಬೇಕಾಗಿ ಬಂದಿದೆ. ಹಾಗೆಯೇ ಎಲ್ಲ ಪಂದ್ಯಗಳೂ ರಾತ್ರಿ 7.30ಕ್ಕೇ ಆರಂಭವಾಗುವುದು. ಇವನ್ನೆಲ್ಲ ಮಾಡಿದ್ದು ಕೇವಲ ಆರ್ಥಿಕ ಲಾಭದ ಹಿನ್ನೆಲೆಯಲ್ಲಿ! ಮೊದಲೇ ಬೌಲಿಂಗ್‌ ಸ್ನೇಹಿ ಪಿಚ್‌ಗಳು, ಇನ್ನೊಂದು ಕಡೆ ರಾತ್ರಿ ಹೊತ್ತೇ ಪಂದ್ಯಗಳು. ರಾತ್ರಿ ಇಬ್ಬನಿಯ ಪರಿಣಾಮ ವಿಪರೀತ. ಭಾರತದ ಬೌಲಿಂಗ್‌ ಎಷ್ಟೇ ಸಮರ್ಥವಾಗಿರಲಿ, ಬ್ಯಾಟಿಂಗ್‌ ಈ ತಂಡದ ನೈಜಶಕ್ತಿ. ಬೌಲಿಂಗ್‌ ಸ್ನೇಹಿ ಪಿಚ್‌ನಲ್ಲಿ ಪಾಕ್‌, ನ್ಯೂಜಿಲ್ಯಾಂಡ್‌ ವಿರುದ್ಧ ಭಾರತದ ಬ್ಯಾಟಿಂಗ್‌ ವಿಫ‌ಲವಾಯಿತು.

ಇದನ್ನೂ ಓದಿ:ಟಿ20 ವಿಶ್ವಕಪ್ 2021: ಪಾಕಿಸ್ಥಾನ ಅಜೇಯ ಓಟ

ಇನ್ನೊಂದು ತೀವ್ರ ಸಮಸ್ಯೆಯೆಂದರೆ ಸತತ ಒಂದೂವರೆ ವರ್ಷ ದಿಂದ ಜೈವಿಕ ಸುರಕ್ಷ ವಲಯದಲ್ಲಿ ಕೂಡಿ ಹಾಕಲ್ಪಟ್ಟಿರುವ ಭಾರತೀಯ ಕ್ರಿಕೆಟಿಗರು! ಅದನ್ನು ವೇಗಿ ಬುಮ್ರಾ ನೇರವಾಗಿಯೇ ಹೇಳಿಬಿಟ್ಟಿದ್ದಾರೆ. ಹಣ ಎಷ್ಟೇ ಬರಲಿ, ಸೌಲಭ್ಯ ಎಷ್ಟೇ ಇರಲಿ, ಇದ್ದಲ್ಲೇ ಇರಬೇಕು. ಅದೇ ಯಾಂತ್ರಿಕ ಪರಿಸ್ಥಿತಿ ಎಂದಾಗ ಆಟಗಾರರಲ್ಲಿ ಜೀವಂತಿಕೆ ಕುಸಿಯುತ್ತದೆ. ಇಷ್ಟರ ಮಧ್ಯೆ ನಿರಂತರ ಕ್ರಿಕೆಟ್‌. ಐಪಿಎಲ್‌ನಂತಹ ಹಣದ ಕೊಪ್ಪರಿಗೆಯಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ. ಐಪಿಎಲ್‌ ಅ.15ಕ್ಕೆ ಮುಗಿಯಿತು. ಕೇವಲ ಎರಡು ದಿನಗಳ ಅಂತರದಲ್ಲಿ ವಿಶ್ವಕಪ್‌ ಶುರು. ಜತೆಗೆ ಕ್ವಾರಂಟೈನ್‌ನಂತಹ ಸಮಸ್ಯೆಗಳು. ಈಗ ಆಟಗಾರರಿಂದ ಹೆಚ್ಚಿನದೇನನ್ನು ನಿರೀಕ್ಷಿಸಬಹುದು?

Advertisement

ಎಲ್ಲಕ್ಕಿಂತ ಮುಖ್ಯವಾದ ವಿಚಾರವೆಂದರೆ ಕೊಹ್ಲಿಯ ನಾಯಕತ್ವದಲ್ಲಿನ ದೋಷಗಳು. ಅಶ್ವಿ‌ನ್‌ರನ್ನು ಅವರು ನಿರಂತರವಾಗಿ ಕಡೆಗಣಿಸುತ್ತಲೇ ಬಂದಿ ದ್ದಾರೆ. ಅದೇಕೆ ಎನ್ನುವುದು ಅರ್ಥವಾಗಿಲ್ಲ. ದ್ವಿಪಕ್ಷೀಯ ಸರಣಿ ಗಳಲ್ಲಿ ಯಶಸ್ವಿಯಾಗುವ ಕೊಹ್ಲಿ, ಬಹುರಾಷ್ಟ್ರೀಯ ಕೂಟಗಳಲ್ಲಿ ಎಡವು ತ್ತಾರೆ! ಪ್ರತೀ ಬಾರಿ ಎದುರಾಳಿ ತಂಡ ಬದಲಾಗುವ ಸನ್ನಿವೇಶದಲ್ಲಿ ಕೊಹ್ಲಿಗೆ ರಣತಂತ್ರ ರೂಪಿಸಲು ಆಗುವುದಿಲ್ಲ ಎನ್ನುವುದು ವಿಶ್ಲೇಷಕರ ಅಭಿಪ್ರಾಯ. ಈಗಂತೂ ಕೊಹ್ಲಿ ಟಿ20 ತಂಡದ ನಾಯಕತ್ವದಿಂದ ಕೆಳಕ್ಕಿಳಿದಿದ್ದಾರೆ, ಏಕದಿನ ನಾಯಕತ್ವವೂ ಅವರ ಕೈತಪ್ಪಬಹುದು. ಮುಂದಿನ ದಿನಗಳಲ್ಲಿ ಭಾರತ ಏನು ಸಾಧಿಸಲಿದೆ ಎನ್ನುವುದೇ ಈಗಿನ ಕುತೂಹಲ.

Advertisement

Udayavani is now on Telegram. Click here to join our channel and stay updated with the latest news.

Next