Advertisement

Archery: ಆರ್ಚರಿ ಚಿನ್ನದತ್ತ ಭಾರತದ ದೃಷ್ಟಿ

12:29 AM Apr 22, 2023 | Team Udayavani |

ಅಂಟಾಲ್ಯ (ಟರ್ಕಿ): “ಆರ್ಚರಿ ವಿಶ್ವಕಪ್‌ ಸ್ಟೇಜ್‌-1” ಸ್ಪರ್ಧೆಯಲ್ಲಿ ಭಾರತ ಅವಳಿ ಚಿನ್ನದ ಮೇಲೆ ಕಣ್ಣಿಟ್ಟಿದೆ. ವನಿತಾ ಕಂಪೌಂಡ್‌ ಮಿಕ್ಸೆಡ್‌ ವಿಭಾಗದಲ್ಲಿ ಜ್ಯೋತಿ ಸುರೇಖಾ ವೆನ್ನಮ್‌-ಓಜಸ್‌ ಪ್ರವೀಣ್‌ ದೇವತಾಲೆ ಮತ್ತು ಪುರುಷರ ರಿಕರ್ವ್‌ ತಂಡ ಸ್ಪರ್ಧೆಯಲ್ಲಿ ಅತನು ದಾಸ್‌, ಬಿ. ಧೀರಜ್‌ ಮತ್ತು ತರುಣ್‌ದೀಪ್‌ ರಾಯ್‌ ಅವರನ್ನೊಳಗೊಂಡ ತಂಡ ಫೈನಲ್‌ ಪ್ರವೇಶಿಸಿದೆ.

Advertisement

ಸುರೇಖಾ ವೆನ್ನಮ್‌ ಅವರ ನೂತನ ಜೋಡಿಯಾಗಿ ಓಜಸ್‌ ದೇವತಾಲೆ ಇದೇ ಮೊದಲ ಸಲ ಸ್ಪರ್ಧೆಗೆ ಇಳಿದಿದ್ದರು. ಇವರು ಮಲೇಷ್ಯಾದ ಫಾತಿನ್‌ ನುಫ‌ತೇಹ್‌ ಮತ್‌ ಸಲೇಹ್‌-ಮೊಹಮ್ಮದ್‌ ಜುವೈದಿ ಮಝುಕಿ ವಿರುದ್ಧ 157-154 ಅಂತರದ ರೋಚಕ ಜಯ ಸಾಧಿಸಿದರು. 12ನೇ ಶ್ರೇಯಾಂಕದ ಚೈನೀಸ್‌ ತೈಪೆ ಜೋಡಿ ಚೆನ್‌ ಇ ಸುವಾನ್‌-ಚೆಮ್‌ ಚೀ ಲುನ್‌ ವಿರುದ್ಧ ಶನಿವಾರ ಫೈನಲ್‌ ನಡೆಯಲಿದೆ.

ಅತನು ದಾಸ್‌, ಬಿ. ಧೀರಜ್‌ ಮತ್ತು ತರುಣ್‌ದೀಪ್‌ ರಾಯ್‌ ಅವರಿಗೆ ಚೀನದ ತಂಡ ಎದುರಾಗಲಿದೆ. ರಿಕರ್ವ್‌ ತಂಡ ಸ್ಪರ್ಧೆಯ ಫೈನಲ್‌ ರವಿವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next