Advertisement

ಚಿಕಿತ್ಸಾ ಪದ್ದತಿಯಲ್ಲಿ ಅಪಾರ ಸಾಧನೆಗೈದ ಡಾ.ವೆಂಕಟರಮಣರಿಗೆ ಇಂಡಿಯನ್ ಸಾಗಾ ಸ್ಟಾರ್ ಅವಾರ್ಡ್

08:17 PM May 09, 2022 | Team Udayavani |

ಶಿರಸಿ: ಭಾರತೀಯ ಚಿಕಿತ್ಸಾ ಪದ್ದತಿಯಲ್ಲಿ ತೋರಿದ ಅನುಪಮ ಸೇವೆಗಾಗಿ ಶಿರಸಿಯ ನಿಸರ್ಗಮನೆ ಮುಖ್ಯ ವೈದ್ಯ ಡಾ.ವೆಂಕಟರಮಣ ಹೆಗಡೆ ಅವರಿಗೆ ಇಂಡಿಯನ್ ಸಾಗಾ ಸ್ಟಾರ್ ಅವಾರ್ಡನ್ನು ಬೆಂಗಳೂರಲ್ಲಿ ನೀಡಲಾಯಿತು.

Advertisement

ಖ್ಯಾತ ಹಿಂದಿ ನಟ ಗೋವಿಂದ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಸಚಿವ ಮುರುಗೇಶ ನಿರಾಣಿ, ಇತರ ಗಣ್ಯರು ಸಮಾರಂಭದಲ್ಲಿ ಇದ್ದರು.

20 ವರ್ಷದಿಂದ ಪ್ರಕೃತಿ ಚಿಕಿತ್ಸೆ, ಯೋಗ, ಆಯುರ್ವೆದ ವಿಭಾಗದಲ್ಲಿ ಚಿಕಿತ್ಸೆ,ಪತ್ರಿಕೆಗಳಲ್ಲಿ ಅಂಕಣ, ಟಿವಿಯಲ್ಲಿ ಕಾರ್ಯಕ್ರಮ ನೀಡಿ, ಜನರಿಗೆ ಮಾದರಿ ಸೇವೆ ನೀಡಿದ್ದಾರೆ.

ಈ ಬಗ್ಗೆ 8 ಪುಸ್ತಕ ಸಹ ಬರೆದಿದ್ದಾರೆ. ಅನೇಕ ಕೃತಿಗಳು ಮರು ಮುದ್ರಣಗಳನ್ನು ಕಂಡಿದೆ. ಯೋಗದ ಕುರಿತು, ಭಾರತೀಯ ವೈದ್ಯಕೀಯ ಪರಂಪರೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಸ್ತುತ ಶಿರಸಿಯ ವೇದಾ ಆರೋಗ್ಯ ಕೇಂದ್ರ ನಿಸರ್ಗ ಮನೆಯ ಮುಖ್ಯ ವೈದ್ಯರಾಗಿ ಕಾರ್‍ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next