Advertisement

ಕೋವಿಡ್ ಭೀತಿ ತಗ್ಗಿದ್ದರೂ ಎಸಿ ಕೋಚ್‌ಗಳಲ್ಲಿ ಹೊದಿಕೆ ಸಿಗಲ್ಲ!

02:49 PM Sep 07, 2020 | Nagendra Trasi |

ನವದೆಹಲಿ: ಕೋವಿಡ್ ಸೋಂಕಿನ ವ್ಯಾಪಿಸುವಿಕೆ ತಗ್ಗಿದ ಬಳಿಕವೂ ರೈಲ್ವೆಯ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವವರು ತಮ್ಮ ಸ್ವಂತ ಹೊದಿಕೆ ಮತ್ತು ಚಾದರಗಳನ್ನು ತರ ಬೇಕಾಗುತ್ತದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್‌ ಕುಮಾರ್‌ ಯಾದವ್‌ ಭಾನುವಾರ ಹೇಳಿದ್ದಾರೆ.

Advertisement

ಪ್ರಯಾಣಿಕರಿಗೆ ಒಂದೇ ಬಾರಿಗೆ ಬಳಸಬಹುದಾದ ಬೆಡ್‌ ಶೀಟ್‌ ಒದಗಿಸಲು ಅಥವಾ ಪ್ರಯಾಣಿಕರೇ ಸ್ವತಃ ಚಾದರ ಮತ್ತು ಹೊದಿಕೆ ತರುವಂತೆ ಸೂಚಿ ಸಲು ನಿರ್ಧರಿಸಿದ್ದೇವೆ. ಇದಕ್ಕಾಗಿ ವಿಸ್ತೃತ ನೀತಿಯೊಂದನ್ನು ಜಾರಿಗೆ ತಂದು, ಅಂತಿಮ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ರೈಲು ಪ್ರಯಾಣದ ವೇಳೆ ಸಾಧ್ಯವಾದಷ್ಟು ನೈರ್ಮಲ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಇಂಥ ನಿರ್ಧಾರ ಕೈಗೊಂಡಿದ್ದೇವೆ ಎಂದೂ ಯಾದವ್‌ ಹೇಳಿದ್ದಾರೆ.
ಈ ಹಿಂದೆ ಎಸಿ ಬೋಗಿಗಳಲ್ಲಿ ಪ್ರಯಾಣಿಕರಿಗೆ ರೈಲ್ವೆಯ ವತಿಯಿಂದಲೇ ಹೊದಿಕೆ ಒದಗಿಸಲಾಗುತ್ತಿತ್ತು. ಆದರೆ, ಕೊರೊನಾ ಸೋಂಕು ದೇಶವನ್ನು ಪ್ರವೇಶಿ ಸಿದ ಬಳಿಕ, ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಇಲಾಖೆಯು ತಿಳಿಸಿತ್ತು.

ಸಂಚಾರ ರದ್ದಾಗಲ್ಲ: ರೈಲ್ವೆಯು ಸುಮಾರು 500ರಷ್ಟು ರೈಲುಗಳ ಸಂಚಾರವನ್ನೇ ರದ್ದು ಮಾಡಲಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಮಂಡಳಿ, ಯಾವುದೇ ರೈಲಿನ ಸಂಚಾರವನ್ನೂ ರದ್ದುಗೊಳಿಸುವ ನಿರ್ಧಾರ ಕೈಗೊಂಡಿಲ್ಲ ಮತ್ತು ಯಾವುದೇ ರೈಲು ನಿಲ್ದಾಣವನ್ನೂ ಮುಚ್ಚಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next