Advertisement

ರೈಲು ರದ್ದಾಗಿದ್ದಕ್ಕೆ ಕ್ಯಾಬ್‌ ಬುಕ್‌ ಮಾಡಿಕೊಟ್ಟ ಅಧಿಕಾರಿಗಳು!

09:05 PM Jul 15, 2022 | Team Udayavani |

ನವದೆಹಲಿ: ಕೊನೆ ಕ್ಷಣದಲ್ಲಿ ರೈಲು ರದ್ದಾಯಿತು ಎನ್ನುವ ಕಾರಣಕ್ಕೆ ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರಯಾಣಿಕರೊಬ್ಬರಿಗೆ ಕ್ಯಾಬ್‌ ಬುಕ್‌ ಮಾಡಿಕೊಟ್ಟಿರುವ ವಿಶೇಷ ಘಟನೆ ಗುಜರಾತ್‌ನಲ್ಲಿ ನಡೆದಿದೆ.

Advertisement

ಐಐಟಿ ಮದ್ರಾಸ್‌ನ ವಿದ್ಯಾರ್ಥಿ ಸತ್ಯಂ ಅವರು ಏಕ್ತಾ ನಗರದಿಂದ ವಡೋದರಕ್ಕೆ ರೈಲ್ವೆ ಟಿಕೆಟ್‌ ಬುಕ್‌ ಮಾಡಿದ್ದರು. ಅಲ್ಲಿಂದ ಅವರು ಚೆನ್ನೈಗೆ ರೈಲಿನಲ್ಲಿ ತೆರಳಬೇಕಿತ್ತು. ಆದರೆ ಏಕ್ತಾ ನಗರದಿಂದ ವಡೋದರಾದ ರೈಲು ಕೊನೆ ಕ್ಷಣದಲ್ಲಿ ರದ್ದಾಗಿದೆ.

ಈ ವಿಚಾರದಲ್ಲಿ ಸತ್ಯಂ ಏಕ್ತಾ ನಗರದ ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ಅವರು ಆತನಿಗೆ ಕಾರೊಂದನ್ನು ಬುಕ್‌ ಮಾಡಿಕೊಟ್ಟಿದ್ದಾರೆ. ಸರಿಯಾದ ಸಮಯಕ್ಕೆ ವಡೋದರಾ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಚೆನ್ನೈ ರೈಲು ಹತ್ತುವುದಕ್ಕೆ ಸಹಾಯ ಮಾಡಿದ್ದಾರೆ. ಈ ವಿಚಾರವನ್ನು ಸತ್ಯಂ ಟ್ವಿಟರ್‌ನಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next