Advertisement

ಮಧ್ಯಾಹ್ನ 2ರಿಂದ 4 ಗಂಟೆಯ ನಡುವೆ ಅಭಿನಂದನ್‌ ಹಸ್ತಾಂತರ: ಪಾಕ್‌

06:52 AM Mar 01, 2019 | udayavani editorial |

ಹೊಸದಿಲ್ಲಿ : ಪಾಕಿಸ್ಥಾನ ತನ್ನ ವಶದಲ್ಲಿರುವ ಭಾರತೀಯ ವಾಯು ಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಇಂದು ಶುಕ್ರವಾರ ಮಧ್ಯಾಹ್ನ 2ರಿಂದ 4 ಗಂಟೆಯ ಒಳಗೆ ವಾಘಾ ಗಡಿಯಲ್ಲಿ  ಭಾರತಕ್ಕೆ ಹಸ್ತಾಂತರಿಸಲಿದೆ ಎಂದು  ಪಾಕ್‌ ವಿದೇಶ ಸಚಿವ ಶಾ ಮಹಮೂದ್‌ ಕುರೇಶಿ ಹೇಳಿದ್ದಾರೆ. 

Advertisement

ತಾಜಾ ವರದಿಗಳ ಪ್ರಕಾರ ಗ್ರೂಪ್‌ ಕ್ಯಾಪ್ಟನ್‌ ಜೆ ಡಿ ಕುರಿಯನ್‌ ಅವರು ಅಭಿನಂದನ್‌ ಅವರನ್ನು ಸ್ವೀಕರಿಸಲಿದ್ದಾರೆ. 

ಈ ನಡುವೆ ಪಾಕ್‌ ವಿದೇಶ ಸಚಿವ ಶಾ ಮಹಮೂದ್‌ ಕುರೇಶಿ ಅವರು ಭಾರತ-ಪಾಕ್‌ ಉದ್ವಿಗ್ನತೆಯ ಶಮನಕ್ಕೆ ಮಧ್ಯವರ್ತಿ ಪಾತ್ರವಹಿಸುವಂತೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಮತ್ತು ರಶ್ಯವನ್ನು ಕೋರಿದ್ದಾರೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next