Advertisement

ಅರುಣಾಚಲ ಪ್ರದೇಶದಲ್ಲಿ ಚೀನಾ ಒಳನುಸುಳುವಿಕೆ: ಬಿಜೆಪಿ ಸಂಸದನ ಹೇಳಿಕೆ ತಳ್ಳಿ ಹಾಕಿದ ಸೇನೆ

11:11 AM Sep 06, 2019 | keerthan |

ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆ ಒಳನುಗ್ಗಿದೆ ಎಂದು ಬಿಜೆಪಿ ಸಂಸದ ತಾಪೀರ್‌ ಗಾವೋ ಹೇಳಿಕೆ ನೀಡಿದ್ದು, ಇದನ್ನು ಭಾರತೀಯ ಸೇನೆ ತಳ್ಳಿ ಹಾಕಿದೆ.

Advertisement

ಅರುಣಾಚಲದ ಭಾರತೀಯ ಜನತಾ ಪಕ್ಷದ ಸಂಸದ ತಾಪೀರ್‌ ಗಾವೋ ತನ್ನ ಫೇಸ್‌ ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ಚೀನಾದ ಸೇನೆ ಭಾರತದ ಗಡಿಯೊಳಗೆ ಸುಮಾರು 60 ಕಿ. ಮೀ ನಷ್ಟು ಒಳ ನುಗ್ಗಿದೆ. ಗಡಿ ಪ್ರದೇಶದ ಅಂಜಾವ್‌ ಜಿಲ್ಲೆಯಲ್ಲಿ ಮರದ ಸೇತುವೆ ನಿರ್ಮಿಸಿದೆ ಎಂದು ಬರೆದು ಕೊಂಡಿದ್ದಾರೆ.  ಆಗಸ್ಟ್‌ ತಿಂಗಳಲ್ಲಿ ಕೊನೆಯ ಭದ್ರತಾ ಕೇಂದ್ರವಾದ ಚಲ್ಗಾಗಂ ನಲ್ಲಿ ಸೇತುವೆ ನಿರ್ಮಿಸಿದೆ  ಎಂದು ಬರೆದುಕೊಂಡಿದ್ದಾರೆ.

ಆದರೆ ಅಂತಹ ಯಾವುದೇ ಬೆಳವಣಿಗೆಗಳು ಚೀನಾ ಗಡಿಯಲ್ಲಿ ನಡೆದಿಲ್ಲ ಎಂದು ಸ್ಚಷ್ಟಪಡಿಸಿದೆ. ಎಲ್‌ ಎಸಿ ಪ್ರದೇಶದಲ್ಲಿ ಅರಣ್ಯ ಪ್ರದೇಶ ಮತ್ತು ತೊರೆಗಳು, ನಾಲೆಗಳು ಹೆಚ್ಚಾಗಿವೆ. ಈ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಗಸ್ತು ಮಾಡಲಾಗುತ್ತದೆ. ಮಳೆಗಾಲದಲ್ಲಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಲಾಗುತ್ತದೆ ಎಂದು ಸೇನೆ ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next