Advertisement

ಕತಾರ್‌ನಿಂದ ಭಾರತೀಯರ ಕರೆ ತರಲು ವಿಶೇಷ ವಿಮಾನ

03:45 AM Jun 23, 2017 | Team Udayavani |

ನವದೆಹಲಿ: ಅರಬ್‌ ರಾಷ್ಟ್ರಗಳಿಂದ ವಾಣಿಜ್ಯ ಹಾಗೂ ಸಾರಿಗೆ ನಿರ್ಬಂಧಕ್ಕೆ ಗುರಿಯಾಗಿರುವ ಕತಾರ್‌ನಲ್ಲಿರುವ ಭಾರತೀಯರಿಗೆ ಸ್ವದೇಶಕ್ಕೆ ಮರಳಲು ವಿಶೇಷ ವಿಮಾನಗಳ ವ್ಯವಸ್ಥೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

Advertisement

ಈ ಕುರಿತು ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಸಚಿವ ಅಶೋಕ್‌ ಗಜಪತಿರಾಜು, “ಭಾರತೀಯ ಮುಸ್ಲಿಮರು ಈದ್‌ ಆಚರಣೆಗಾಗಿ ತಮ್ಮ ಕುಟುಂಬದವರನ್ನು ಸೇರಿಕೊಳ್ಳಲು ಕೇಂದ್ರ ಸರ್ಕಾರ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದೆ. ಏರ್‌ ಇಂಡಿಯಾ ಹಾಗೂ ಇತರ ಖಾಸಗಿ ವಿಮಾನಯಾನ ಸಂಸ್ಥೆಗಳು ಕೊಚ್ಚಿ, ತಿರುವನಂತಪುರ ಮತ್ತು ಮುಂಬೈ ವಿಮಾನ ನಿಲ್ದಾಣಗಳಿಂದ ದೋಹಾಗೆ ಹೆಚ್ಚುವರಿ ವಿಮಾನಗಳನ್ನು ಬಿಡಲಿವೆ,’ ಎಂದು ಹೇಳಿದ್ದಾರೆ.

ಖತಾರ್‌ನಲ್ಲಿ ಸುಮಾರು 7 ಲಕ್ಷ ಭಾರತೀಯರು ನೆಲೆಸಿದ್ದು, ನಿರ್ಬಂಧದ ಬೆನ್ನಲ್ಲೇ ಅನೇಕರು ಸ್ವದೇಶಕ್ಕೆ ಮರಳಲು ಹೊರಟಿದ್ದಾರೆ. ಆದರೆ, ಟಿಕೆಟ್‌ಗೆ ಭಾರೀ ಬೇಡಿಕೆ ಇರುವ ಕಾರಣ ಅವರಿಗೆ ಟಿಕೆಟ್‌ ಕಾಯ್ದಿರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸರ್ಕಾರ ಹೆಚ್ಚುವರಿ ವಿಮಾನದ ನಿರ್ಧಾರ ಕೈಗೊಂಡಿದೆ,’ ಎಂದು ಸಚಿವ ಗಜಪತಿ ರಾಜು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next