Advertisement

15ನೇ ಶತಮಾನದ ಪ್ರತಿಮೆಗಳನ್ನು ವಾಪಸ್‌ ತರುವಲ್ಲಿ ಭಾರತ ಸಫ‌ಲ

01:21 AM Nov 20, 2020 | mahesh |

ಚೆನ್ನೈ: ತಮಿಳುನಾಡಿನ ಆನಂದಮಂಗಲಂ ಮಂದಿರದಿಂದ ಕಳುವಾಗಿ ಲಂಡನ್‌ ಸೇರಿದ್ದ ರಾಮ, ಸೀತೆ ಮತ್ತು ಲಕ್ಷಣರ ಕಂಚಿನ ವಿಗ್ರಹಗಳನ್ನು ಭಾರತಕ್ಕೆ ವಾಪಸ್‌ ತರುವಲ್ಲಿ ಕೇಂದ್ರ ಸರಕಾರ ಯಶಸ್ವಿಯಾಗಿದೆ. ಈ ಪ್ರತಿಮೆಗಳನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ರಾಜ್ಯ ಖಾತೆ ಸಚಿವ ಪ್ರಲ್ಹಾದ್‌ ಸಿಂಗ್‌ ಪಟೇಲ್‌, ತಮಿಳುನಾಡಿನ ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

Advertisement

“‘ಲಂಡನ್‌ನಲ್ಲಿನ ಡೀಲರ್‌ ಬಳಿಯಿದ್ದ ಈ ಪ್ರತಿಮೆಗಳನ್ನು ಹಿಂಪಡೆಯಲು ಶ್ರಮಿಸಿದ ಎಲ್ಲರಿಗೂ ಇದು ಹೆಮ್ಮೆಯ ಸಂಗತಿ. ಇಈ ಪ್ರಯತ್ನದಲ್ಲಿ ಲಂಡನ್‌ನಲ್ಲಿನ ಭಾರತೀಯ ಹೈಕಮಿಷನ್‌ನ ಪಾತ್ರವೂ ಪ್ರಮುಖವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿಯವರ ಸಹಾಯವೂ ಅಧಿಕವಿದೆ” ಎಂದು ತಮಿಳುನಾಡಿನ ಎಡಿಜಿಪಿ ಅಭಯ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next