Advertisement

ಕರ್ತಾರ್‌ಪುರ ಕಾರಿಡಾರ್‌ ಯೋಜನೆ: ಭಾರತ-ಪಾಕ್‌ ಅಧಿಕಾರಿಗಳ ಸಭೆ

09:53 AM May 28, 2019 | Team Udayavani |

ಚಂಡೀಗಢ : ಪಂಜಾಬ್‌ ನ ಗುರುದಾಸಪುರ ಜಿಲ್ಲೆಯಲ್ಲಿನ ಡೇರಾ ಬಾಬಾ ನಾನಕ್‌ ಮಂದಿರವನ್ನು ಗಡಿಯಾಚೆಗಿರುವ ಕರ್ತಾರ್‌ಪುರದಲ್ಲಿನ ದರ್ಬಾರ್‌ ಸಾಹಿಬ್‌ ಗುರುದ್ವಾರದೊಂದಿಗೆ ಜೋಡಿಸುವ ಕಾರಿಡಾರ್‌ ನಿರ್ಮಾಣ ಯೋಜನೆಯ ಬಗ್ಗೆ ಚರ್ಚಿಸಲು ಭಾರತ – ಪಾಕಿಸ್ಥಾನದ ಅಧಿಕಾರಿಗಳು ಇಂದು ಸೋಮವಾರ ಸಭೆ ನಡೆಸಿದರು.

Advertisement

ಕರ್ತಾರ್‌ಪುರದ ಝೀರೋ ಪಾಯಿಂಟ್‌ ನಲ್ಲಿ ನಡೆದ ಈ ಸಭೆಯು ಸುಮಾರು ಎರಡು ತಾಸು ಕಾಲ ನಡೆಯಿತು. ಸಭೆಯಲ್ಲಿ ಉಭಯ ದೇಶದ ಅಧಿಕಾರಿಗಳು ಕಾರಿಡಾರ್‌ ನಿರ್ಮಾಣ ಯೋಜನೆ ಕುರಿತ ಹಲವಾರು ವಿಷಯಗಳನ್ನು ಚರ್ಚಿಸಿದರು.

ಭಾರತೀಯ ತಂಡದಲ್ಲಿ ವಿದೇಶ ವ್ಯವಹಾರಗಳ ಸಚಿವಾಲಯ, ಗೃಹ ಸಚಿವಾಲಯ ಮತ್ತು ಲ್ಯಾಂಡ್‌ ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾ, ಭಾರತದ ನ್ಯಾಶನಲ್‌ ಹೈವೆ ಅಥಾರಿಟಿ ಮತ್ತಿತರ ಇಲಾಖೆಯ ಅಧಿಕಾರಿಗಳು ಅಧಿಕಾರಿಗಳು ಇದ್ದರು.

ಕಳೆದ ವರ್ಷ ನವೆಂಬರ್‌ನಲ್ಲಿ ಭಾರತ ಮತ್ತು ಪಾಕಿಸ್ಥಾನ ಮಹತ್ವದ ಉಪಕ್ರಮದಲ್ಲಿ ಕರ್ತಾರ್‌ಪುರ ಕಾರಡಾರ್‌ ನಿರ್ಮಾಣ ಯೋಜನೆಗೆ ಒಪ್ಪಿಕೊಂಡಿದ್ದವು

Advertisement

Udayavani is now on Telegram. Click here to join our channel and stay updated with the latest news.

Next