Advertisement

ಇಂಡಿಯಾ ಓಪನ್‌: ಭಾರತೀಯರ ಮುನ್ನಡೆ

03:03 AM Mar 28, 2019 | Sriram |

ಹೊಸದಿಲ್ಲಿ: “ಇಂಡಿಯಾ ಓಪನ್‌’ ಬ್ಯಾಡ್ಮಿಂಟನ್‌ ಕೂಟದಲ್ಲಿ ಪಿ.ವಿ. ಸಿಂಧು, ಕೆ. ಶ್ರೀಕಾಂತ್‌ ಸಹಿತ ಭಾರತದ ಆಟಗಾರರು ಮುನ್ನಡೆ ಸಾಧಿಸಿದ್ದಾರೆ.

Advertisement

ಪುರುಷರ ವಿಭಾಗದ ಪಂದ್ಯದಲ್ಲಿ ಶ್ರೀಕಾಂತ್‌ ಹಾಂಕಾಂಗ್‌ನ ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌ ಅವರನ್ನು 21-16, 18-21, 21-19 ಗೇಮ್‌ಗಳಿಂದ ಸೋಲಿಸಿದರು. ಅವರ ಮುಂದಿನ ಎದುರಾಳಿ ಚೀನದ ಲುಗುವಾಂಗ್‌ಜೂ. ಸಮೀರ್‌ ವರ್ಮ, ಬಿ. ಸಾಯಿ ಪ್ರಣೀತ್‌ ಕೂಡ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಇವರಿಬ್ಬರೂ ಮುಖಾಮುಖೀಯಾಗಿದ್ದಾರೆ. ಶುಭಂಕರ್‌ ಡೇ ಇಂಡೋನೇಶ್ಯದ ಟಾಮಿ ಸುಗಿಯಾರ್ಟೊ ಅವರನ್ನು 14-21, 22-20, 21-11ರಿಂದ ಸೋಲಿಸಿದರು.

ವನಿತಾ ಸಿಂಗಲ್ಸ್‌ನಲ್ಲಿ ಸಿಂಧು ಭಾರತ ದವರೇ ಆದ ಮುಗಾœ ಅಗ್ರಿ ವಿರುದ್ಧ 21-8, 21- 13 ನೇರ ಗೇಮ್‌ಗಳಿಂದ ಗೆದ್ದರು. ದ್ವಿತೀಯ ಸುತ್ತಿನ ಎದುರಾಳಿ ಹಾಂಕಾಂಗ್‌
ನ ಡೆಂಗ್‌ ಜಾಯ್‌ ಕ್ಸುವಾನ್‌.

Advertisement

Udayavani is now on Telegram. Click here to join our channel and stay updated with the latest news.

Next