Advertisement

ರಶ್ದಿ ಮೇಲೆ ಹಲ್ಲೆಗೆ ಭಾರತ ಖಂಡನೆ

09:18 PM Aug 25, 2022 | Team Udayavani |

ನವದೆಹಲಿ: ನ್ಯೂಯಾರ್ಕ್‌ ನಗರದಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಲೇಖಕ ಸಲ್ಮಾನ್‌ ರಶಿª ಅವರ ಮೇಲೆ ನಡೆದ ಹಲ್ಲೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

Advertisement

ಘಟನೆ ನಡೆದ 2 ವಾರಗಳ ಬಳಿಕ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ, “ಭಾರತ ಯಾವತ್ತೂ ಹಿಂಸೆ ಮತ್ತು ಪ್ರತ್ಯೇಕತಾವಾದದ ವಿರುದ್ಧ ನಿಂತಿದೆ. ಸಲ್ಮಾನ್‌ ರಶ್ದಿ ಮೇಲೆ ನಡೆದ ಹೀನಾಯ ದಾಳಿಯನ್ನು ನಾವು ಖಂಡಿಸುತ್ತೇವೆ ಮತ್ತು ಅವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸುತ್ತೇವೆ’ ಎಂದು ಗುರುವಾರ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಗ್ಚಿ ಹೇಳಿದ್ದಾರೆ.

ರಶ್ದಿ ಅವರ ಕುತ್ತಿಗೆಗೆ 3 ಬಾರಿ, ಹೊಟ್ಟೆಗೆ 4 ಬಾರಿ ಇರಿಯಲಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next