Advertisement

Border ಶಾಂತಿ ಮೇಲೆ ಭಾರತ, ಚೀನ ಸಂಬಂಧ: ಜೈಶಂಕರ್‌

12:13 AM May 13, 2024 | Team Udayavani |

ಹೊಸದಿಲ್ಲಿ: ಭಾರತ ಮತ್ತು ಚೀನದ ನಡುವಿನ ದ್ವಿಪಕ್ಷೀಯ ಸಂಬಂಧಗಳು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲಸುವುದರ ಮೇಲೆ ಅವಲಂಬಿತವಾ ಗಿದೆ. ಚೀನದೊಂದಿಗೆ ಬಾಕಿ ಇರುವ ಸಮಸ್ಯೆಗಳಿಗೂ ಪರಿಹಾರ ದೊರೆತರೆ ಮಾತ್ರ ಸಂಬಂಧ ಸುಧಾರಿಸಲು ಸಾಧ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

Advertisement

ಪೂರ್ವ ಲಡಾಖ್‌ ಬಿಕ್ಕಟ್ಟು 5ನೇ ವರ್ಷಕ್ಕೆ ತಲುಪಿರುವಂತೆಯೇ ಸಚಿವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಚೀನದ ಜತೆಗಿನ ಭಾರತದ ಬಿಕ್ಕಟ್ಟಿಗೆ ಯಾವಾಗ ಪರಿಹಾರ ಕಂಡುಕೊಳ್ಳಬ ಹುದು ಎಂದು ಸಚಿವ ಜೈಶಂಕರ್‌ ಅವ ರನ್ನು ಸಂದರ್ಶನವೊಂದರಲ್ಲಿ ಪ್ರಶ್ನಿಸಲಾ ಗಿದೆ. ಈ ವೇಳೆ ಉತ್ತರಿಸಿದ ಅವರು, ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಬೇಕು ಎಂದೇ ಎಲ್ಲ ರಾಷ್ಟ್ರಗಳು ಬಯಸುತ್ತವೆ. ಆದರೆ ಭಾರತ-ಚೀನದ ನಡುವಿನ ಸಂಬಂಧ ಸದ್ಯಕ್ಕೆ ಹದಗೆಟ್ಟಿದೆ. ಅದಕ್ಕೆ ಕಾರಣ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಗೆ ಧಕ್ಕೆಯಾಗಿರುವುದು. ಗಸ್ತು ಹಕ್ಕುಗಳು ಮತ್ತು ಗಸ್ತು ನಿಯೋಜನೆಯ ಸಾಮರ್ಥ್ಯ ಸೇರಿದಂತೆ ಇನ್ನೂ ಕೆಲವು ಪ್ರಮುಖ ಸಮಸ್ಯೆಗಳಿಗೆ ಉಭಯ ರಾಷ್ಟ್ರಗಳು ಪರಿಹಾರ ಕಂಡುಕೊಳ್ಳಬೇ ಕಿದ್ದು, ಶೀಘ್ರವೇ ಪರಿಹಾರ ಸಿಗುತ್ತದೆ ಎಂದು ಆಶಿಸುತ್ತೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next