Advertisement

ಯಾವುದೇ ಭದ್ರತಾ ಸವಾಲು ಎದುರಿಸಲು ಭಾರತ ಸಿದ್ದ; ಪ್ರಧಾನಿ ಮೋದಿ

11:48 AM Aug 15, 2017 | Team Udayavani |

ಹೊಸದಿಲ್ಲಿ : ನೆಲ, ಜಲ, ವಾಯು ಮಾರ್ಗದ ಮೂಲಕ ಎದುರಾಗಬಲ್ಲ ಯಾವುದೇ ರೀತಿಯ ಭದ್ರತಾ ಸವಾಲುಗಳನ್ನು ಎದುರಿಸಲು ಭಾರತ ಸರ್ವಶಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಚೀನವನ್ನಾಗಲೀ, ಡೋಕ್‌ಲಾಂ ನಲ್ಲಿ ಸಾಗಿರುವ ಉಭಯ ದೇಶಗಳ ಸೇನೆಯ ಮುಖಾಮುಖೀಯನ್ನಾಗಲೀ, ನೇರವಾಗಿ ಪ್ರಸ್ತಾವಿಸದೆ, ಪ್ರಧಾನಿ ಮೋದಿ, ದೇಶದ ಭದ್ರತೆಯು ಸರಕಾರದ ಅದ್ಯತೆಯಾಗಿದೆ; ಅಂತೆಯೇ ಸರಕಾರ ತನ್ನ ಯೋಧರನ್ನು ಪರಿಣಾಮಕಾರಿ ಗಡಿ ರಕ್ಷಣೆಗಾಗಿ ನಿಯೋಜಿಸಿದೆ ಎಂದು ಹೇಳಿದರು. 

ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡುತ್ತಾ ಪ್ರಧಾನಿ ಮೋದಿ ಅವರು, ಕಳೆದ ವರ್ಷಸೇನೆ ಕೈಗೊಂಡಿದ್ದ ಸರ್ಜಿಕಲ್‌ ದಾಳಿಯನ್ನು ಉಲ್ಲೇಖೀಸಿ ಇಡಿಯ ವಿಶ್ವವೇ ಭಾರತೀಯ ಸೇನೆಯ ಕ್ಷಮತೆ ಮತ್ತು ತಾಕತ್ತು ಏನೆಂಬುದನ್ನು ಅರಿತುಕೊಂಡಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next