Advertisement

INDIA ಮೈತ್ರಿಕೂಟ ತುಂಬಾ ಪ್ರಬಲವಾಗಿದೆ, ಕಾಂಗ್ರೆಸ್ ಜತೆ…: ಅಖಿಲೇಶ್ ಹೇಳಿಕೆ

06:28 PM Oct 23, 2023 | Team Udayavani |

ಡೆಹ್ರಾಡೂನ್ (ಉತ್ತರಾಖಂಡ) : ಇಂಡಿಯಾ ಮೈತ್ರಿಕೂಟ ತುಂಬಾ ಪ್ರಬಲವಾಗಿದ್ದು ಕಾಂಗ್ರೆಸ್ ಜತೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ಕಾಂಗ್ರೆಸ್ ಆಲೋಚನೆಗಳು ವಿಭಿನ್ನವಾಗಿವೆ, ನಮ್ಮ ಆಲೋಚನೆಯು ವಿಭಿನ್ನವಾಗಿದೆ. .ಉತ್ತರಾಖಂಡದ ಜನರು ಸಮಾಜವಾದಿ ಪಕ್ಷದೊಂದಿಗೆ ಒಗ್ಗೂಡುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದರು.

ಲಕ್ನೋದಲ್ಲಿ ಹಾಕಲಾದ ‘ಭವಿಷ್ಯದ ಪ್ರಧಾನಿ’ ಹೋರ್ಡಿಂಗ್‌ಗಳ ಕುರಿತು ಪ್ರತಿಕ್ರಿಯಿಸಿ, ಪೋಸ್ಟರ್‌ಗಳನ್ನು ಹಾಕುವುದರಿಂದ ಯಾರೂ ಪ್ರಧಾನಿಯಾಗುವುದಿಲ್ಲ. ಯಾವುದೇ ಬೆಂಬಲಿಗರು ಪೋಸ್ಟರ್ ಹಾಕಿದ್ದರೆ ಅವರು ತಮಗೆ ಬೇಕಾದುದನ್ನು ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯನ್ನು ನಿಲ್ಲಿಸುವುದು ಸಮಾಜವಾದಿಗಳ ಗುರಿಯಾಗಿದೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಎಸ್‌ಪಿ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿಯ ನಡುವೆಯೇ ಈ ಹೇಳಿಕೆ ನೀಡಿದ್ದಾರೆ. ಶನಿವಾರ ಅಖಿಲೇಶ್ , ಕಾಂಗ್ರೆಸ್ ನಮ್ಮ ಪಕ್ಷಕ್ಕೆ ದ್ರೋಹ ಮಾಡಬಾರದು ಮತ್ತು ಅವರು ಮೈತ್ರಿ ಬೇಕೇ ಅಥವಾ ಬೇಡವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next