ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದ ಸ್ಟೇಷನ್ ರಸ್ತೆಯಲ್ಲಿರುವ ಫರ್ನೀಚರ್ ಅಂಗಡಿಗಳಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ.
ಫರ್ನೀಚರ್ ತಯಾರಿಕೆ ಘಟಕವೂ ಇದೇ ಪ್ರದೇಶಲ್ಲಿದ್ದು, ಅಗ್ನಿ ಅವಘಡದಲ್ಲಿ ಯಂತ್ರೋಪಕರಣ, ಸಾಗವಾನಿ ಸೇರಿದಂತೆ ಇತರೆ ಕಟ್ಟಿಗೆ ಬೆಂಕಿಗೆ ಆಹುತಿಯಾಗಿವೆ.
ಶಾಂತಪ್ಪ ಬಡಿಗೇರ, ಬಸವರಾಜ, ಸಂಗು, ಮಲ್ಲಿಕಾರ್ಜುನ ಬಡಿಗೇರ, ಸಂತೋಷ ಬಡಿಗೇರ ಎಂಬುವವರಿಗೆ ಸೇರಿದ ಐದು ಅಂಗಡಿಗಳು ಹಾನಿಯಾಗಿದೆ.
ಇದನ್ನೂ ಓದಿ:ಮಲೀನ ನೀರು ಶುದ್ಧೀರಣ ಘಟಕಕ್ಕೆ ಅನುದಾನ: ಅಜಯಸಿಂಗ್
ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸೇವಾ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.
ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಧಾವಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ