Advertisement

ಇಂಡಿಪೆಂಡೆನ್ಸ್‌ ಕಪ್‌ ಫುಟ್ಬಾಲ್‌: ಅಲೋಶಿಯಸ್‌,ಯೇನಪೊಯ ಕಾಲೇಜು ಪ್ರಥಮ

11:14 AM Aug 16, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್‌ ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದ ಫುಟ್ಬಾಲ್‌ ಕ್ರೀಡಾಂಗಣದಲ್ಲಿ ಕಳೆದ ಒಂ ತಿಂಗಳಿನಿಂದ ನಡೆಯುತ್ತಿರುವ 21ನೇ ಇಂಡಿಪೆಂಡೆನ್ಸ್‌ ಕಪ್‌ ಫುಟ್ಬಾಲ್‌ ಪಂದ್ಯಾವಳಿಯ ಪೈನಲ್‌ ಪಂದ್ಯಾಟ ಮಂಗಳವಾರ ನಡೆಯಿತು. 

Advertisement

ಹೈಸ್ಕೂಲ್‌ ವಿಭಾಗದಲ್ಲಿ ಲೂರ್ಡ್‌ ಸೆಂಟ್ರಲ್‌ ಸ್ಕೂಲ್‌ ತಂಡವು ಸ್ವಾಮಿ ಸದಾನಂದ ಸರಸ್ವತಿ ಶಾಲಾ ತಂಡವನ್ನು 4-3 ಗೋಲುಗಳ ಅಂತರ ದಿಂದ ಸೋಲಿಸಿ ವಿಜಯಿಯಾಯಿತು. ಕಾಲೇಜು ವಿಭಾಗದಲ್ಲಿ ಸೈಂಟ್‌ ಅಲೋಶಿಯಸ್‌ ತಂಡ ಯೇನಪೊಯ ಕಾಲೇಜು ತಂಡವನ್ನು 3-2 ಗೋಲುಗಳಿಂದ ಸೋಲಿಸಿತು. ಪಿಯು ವಿಭಾಗದಲ್ಲಿ ಯೇನಪೊಯ ಕಾಲೇಜು ಪ್ರಥಮ ಹಾಗೂ ಸೈಂಟ್‌ ಅಲೋಶಿಯಸ್‌ ಕಾಲೇಜು ದ್ವಿತೀಯ ಸ್ಥಾನ ಪಡೆದವು. 

ಪ್ರಶಸ್ತಿ ಸಮಾರಂಭ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಜೆ.ಆರ್‌. ಲೋಬೋ, ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ರೀಜನಲ್‌ ಮ್ಯಾನೇ ಜರ್‌ ಧರ್ಮರಾಜ್‌, ರಾಜ್ಯ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಪ್ರಕೋಷ್ಠದ ಸಹ ಸಂಚಾಲಕ ಬದ್ರೀನಾಥ್‌ ಕಾಮತ್‌, ಯೂನಿಯನ್‌ ಬ್ಯಾಂಕ್‌ನ ಸೀನಿಯರ್‌ ಮ್ಯಾನೇ ಜರ್‌ ಪ್ರೀತಮ್‌ ಬಿ.ಆರ್‌., ಕರ್ನಾಟಕ ಪರ್ಸಿನ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್‌ ಬೆಂಗ್ರೆ, ಪ್ರಮುಖರಾದ ಸತೀಶ್‌ ಕುಮಾರ್‌, ಆಸಿಫ್‌ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್‌ ಅಸೋ ಸಿಯೇಶನ್‌ ಅಧ್ಯಕ್ಷ ಡಿ.ಎಂ.ಅಸ್ಲಾಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹುಸೇನ್‌ ಬೋಳಾರ್‌ ಕಾರ್ಯಕ್ರಮ ನಿರೂಪಿಸಿ, ಮನ್ಸೂರ್‌ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆಯ ಪದಾಧಿಕಾರಿಗಳಾದ ಅನಿಲ್‌ ಕುಮಾರ್‌ ಪಿ.ವಿ. ಯುವರಾಜ್‌, ಉಮೇಶ್‌ ಉಚ್ಚಿಲ್‌, ಲತೀಫ್‌ ಬೆಂಗ್ರೆ, ರಾಜ್ಯ ಸಂಸ್ಥೆಯ ಅಧ್ಯಕ್ಷ ವಿಜಯ್‌ ಸುವರ್ಣ, ಹರೀಶ್ಚಂದ್ರ ಬೆಂಗ್ರೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next