Advertisement

ಗಂಗಾವತಿ: ಅಂಗವಿಕಲರಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಬೈಕ್ ಜಾಥಾ

12:23 PM Aug 14, 2022 | Team Udayavani |

ಗಂಗಾವತಿ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗಂಗಾವತಿ ತಾಲೂಕಿನ ಅಂಗವಿಕಲರ ಸಂಘದ ವತಿಯಿಂದ ಬೈಕ್ ರ್ಯಾಲಿ ಮೂಲಕ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

Advertisement

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಅಂಗವಿಕಲರ ಬೈಕ್ ರ್ಯಾಲಿಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿ, ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಲಕ್ಷಾಂತರ ಜನರು ತ್ಯಾಗ, ಬಲಿದಾನ ಮಾಡಿದ್ದಾರೆ. ಅವರ ತ್ಯಾಗದ ಫಲ ವ್ಯರ್ಥವಾಗದಂತೆ ನಮಗೆ ದೊರಕಿರುವ ಸ್ವಾತಂತ್ರವನ್ನು ನಾವೆಲ್ಲ ಉಳಿಸಿಕೊಂಡು ದೇಶವನ್ನು ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಸರ್ವ ಜನರ ಏಳ್ಗೆಯನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.

ದೇಶದಲ್ಲಿರುವ ಬಡತನ ಹಾಗೂ ನಿರುದ್ಯೋಗ ಸಮಸ್ಯೆ ನಿರ್ಮೂಲನೆ ಮಾಡಿ ವಿಶ್ವದಲ್ಲಿಯೇ ಮಾದರಿಯ ದೇಶ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರಮ ಪಡುತ್ತಿದ್ದು, ಅವರಿಗೆ ಎಲ್ಲರೂ ಸಾಥ್ ನೀಡುವಂತೆ ಕರೆ ನೀಡಿದರು.

ಅಂಗವಿಕಲರ ಸಂಘದ ಮಂಜುನಾಥ ಹೊಸ್ಕೇರಾ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next