Advertisement

ಪರಿಶುದ್ಧ ಪರಿಸರದಿಂದ ಸಾನ್ನಿಧ್ಯ ವೃದ್ಧಿ: ಏರ್ಯ

12:40 AM Jan 26, 2019 | Team Udayavani |

ಕಾರ್ಕಳ: ಕೋಟಿ- ಚೆನ್ನಯರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಾಗದೇ ಎಲ್ಲರಿಂದಲೂ ಆರಾಧಿಸಲ್ಪಡುವವರು. ಧಾರ್ಮಿಕ ಕ್ಷೇತ್ರಗಳು ಪರಿಶುದ್ಧವಾಗಿದ್ದಲ್ಲಿ ಸಾನ್ನಿಧ್ಯ ವೃದ್ಧಿಸುವುದು. ಇಂತಹ ಪರಿಸರ ಬೋಳದಲ್ಲಿದೆ ಎಂದು ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.

Advertisement

ಅವರು ಶುಕ್ರವಾರ ಬೋಳ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಬ್ರಹ್ಮಕಲ ಶೋತ್ಸವ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ಸುಂದರ ಗರಡಿಯ ನಿರ್ಮಾಣದಲ್ಲಿ ಅನೇಕರ ಕೊಡುಗೆ, ಪರಿಶ್ರಮವಿದೆ ಎಂದು ಹೇಳಿದರು.

ಉದ್ಯಮಿ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿದರು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಚಂದ್ರ ಹೆಗ್ಡೆ, ಕಾರ್ಯಾಧ್ಯಕ್ಷ ಜಯರಾಮ ಸಾಲಿಯಾನ್‌, ತುಕಾರಾಮ ಶೆಟ್ಟಿ, ಉದಯ ಶೆಟ್ಟಿ ವೇದಿಕೆಯಲ್ಲಿದ್ದರು. ಸದಾಶಿವ ಶೆಟ್ಟಿ ಸ್ವಾಗತಿಸಿ, ದೀಕ್ಷಾ ಹೆಗ್ಡೆ ಪ್ರಾರ್ಥಿಸಿದರು. ಸಂಗೀತ ಕುಲಾಲ್‌ ನಿರೂಪಿಸಿ, ಸತೀಶ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next