Advertisement

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

12:38 AM May 21, 2024 | Team Udayavani |

ಮಂಗಳೂರು: ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಏರಿಕೆ ಹಿನ್ನೆಲೆ ಯಲ್ಲಿ ಬಂಟ್ವಾಳದ ಶಂಭೂರಿ ನಲ್ಲಿರುವ ಎಎಂಆರ್‌ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಮಂಗಳೂರಿಗೆ ನೀರುಣಿಸುವ ತುಂಬೆ ಡ್ಯಾಂಗೆ ಸೋಮವಾರ ಹರಿಸಲಾಗಿದೆ.

Advertisement

ನೇತ್ರಾವತಿ ನದಿ ಪಾತ್ರದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ನದಿಗೆ ನೀರಿನ ಹರಿವು ಆರಂಭವಾಗಿದೆ. ತುಂಬೆ ಅಣೆಕಟ್ಟೆಗಿಂತ ಹಿಂದೆ ಇರುವ ಎಎಂಆರ್‌ ಅಣೆಕಟ್ಟು ಪ್ರಸ್ತುತ ಬಹುತೇಕ ಭರ್ತಿಯಾಗಿರುವುದರಿಂದ ಅಲ್ಲಿಂದ ನೀರನ್ನು ಹೊರಬಿಡಲಾಗುತ್ತಿದೆ. ಈ ನೀರು ತುಂಬೆಗೆ ಸೇರುವುದರಿಂದ ಇಲ್ಲಿನ ನೀರಿನ ಮಟ್ಟವೂ ಏರಲಿರುವುದರಿಂದ ಮಂಗಳೂರಿನ ನೀರಿನ ಸಮಸ್ಯೆ ದೂರವಾಗುವ ನಿರೀಕ್ಷೆ ಇದೆ.

ತುಂಬೆ ಅಣೆಕಟ್ಟಿನಲ್ಲಿ (6 ಮೀ. ಎತ್ತರ)
ಸೋಮವಾರ 3.42 ಮೀ. ಮಾತ್ರ ನೀರು
ಲಭ್ಯವಿದ್ದು ಮುಂದಿನ 10 ದಿನಗಳಿಗೆ ಮಾತ್ರ ಮಂಗಳೂರು ನಗರಕ್ಕೆ ಲಭ್ಯವಾ ಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಕಳೆದ ಕೆಲವು ದಿನಗಳಿಂದ ರೇಶನಿಂಗ್‌ ಮೂಲಕ ನೀರು ಸರಬರಾಜು ಮಾಡಲಾ ಗುತ್ತಿದೆ. ಬೆಳ್ತಂಗಡಿ, ಸುಬ್ರಹ್ಮಣ್ಯ ಪರಿಸರ ದಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆ ಯಾಗಿರುವ ಕಾರಣ ನೀರಿನ ಹರಿವು ಆರಂಭಗೊಂಡಿದೆ. ಸೋಮವಾರ ಕೂಡ ನದಿ ಪಾತ್ರದ ಬೆಳ್ತಂಗಡಿ, ಪುತ್ತೂರು, ಸುಬ್ರಹ್ಮಣ್ಯ ಪರಿಸರದ ಹೆಚ್ಚಿನ ಕಡೆ ಉತ್ತಮ ಮಳೆಯಾಗಿದೆ. ಇದರಿಂದ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಮಂಗಳೂರಿನ ನೀರಿನ ಸಮಸ್ಯೆಯೂ ದೂರವಾಗುವ ಆಶಾವಾದ ಹೊಂದಲಾಗಿದೆ.

ಎಎಂಆರ್‌ಆರ್‌ ಕೋರಿಕೆ
ಮೇ 20ರ ಲೆಕ್ಕಾಚಾರ ಪ್ರಕಾರ ಎಎಂಆರ್‌ ಡ್ಯಾಂನ ನೀರಿನ ಮಟ್ಟ 18.60 ಮೀ. ಇದೆ. ಗರಿಷ್ಠ ಮಟ್ಟ 18.90 ಮೀ. ದಾಟಿದಲ್ಲಿ ಬ್ಯಾರೇಜ್‌ನ ವಿನ್ಯಾಸ ಹಾಗೂ ಸುರಕ್ಷತೆ ದೃಷ್ಟಿಯಿಂದ ಉಕ್ಕೇರುವ ಸಾಧ್ಯತೆ ಇದೆ. ಜತೆಗೆ ಪ್ರಸ್ತುತ ನೀರಿನ ಮಟ್ಟವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸುರಕ್ಷೆ ದೃಷ್ಟಿಯಿಂದ ಡ್ಯಾಂನಲ್ಲಿ ಲಭ್ಯವಿರುವ ನೀರನ್ನು ನದಿಯ ಕೆಳಭಾಗಕ್ಕೆ ಬಿಡುಗಡೆ ಮಾಡುವುದು ಸೂಕ್ತ. ಹೀಗಾಗಿ ಟರ್ಬೈನ್‌ಗಳನ್ನು ಪ್ರಾರಂಭಿಸಲು ಅಥವಾ 18.9 ಮೀ.ಗಿಂತ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಅನುಮತಿ ನೀಡುವಂತೆ ಶುಕ್ರವಾರ ಎಎಂಆರ್‌ ಪವರ್‌ ಪ್ರೈ.ಲಿ.ನಿಂದ ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next