Advertisement

ಪಿಂಚಣಿ ಮೊತ್ತ ಹೆಚ್ಚಿಸಿ: ಮಾಜಿ ಕ್ರಿಕೆಟಗರ ಮನವಿ

02:01 AM Jun 01, 2019 | Team Udayavani |
ಹೊಸದಿಲ್ಲಿ: ಸಂಜಯ್‌ ಜಗದಾಳೆ, ಆಶು ದಾನಿ, ವಿನಯ್‌ ಲಿಂಬಾ ಸೇರಿದಂತೆ ಹಲವು ಮಾಜಿ ರಣಜಿ ಕ್ರಿಕೆಟಿಗರು ತಮಗೆ ನೀಡುತ್ತಿರುವ ಪಿಂಚಣಿ ಮೊತ್ತವನ್ನು ಹೆಚ್ಚಿಸಬೇಕು ಎಂದು ಬಿಸಿಸಿಐಗೆ ಒತ್ತಾಯಿಸಿದ್ದಾರೆ.

ಕನಿಷ್ಠ 25 ಪ್ರಥಮ ದರ್ಜೆ ಕ್ರಿಕೆಟ್ ಕೂಟದಲ್ಲಿ ಆಡಿದ ಮಾಜಿ ಕ್ರಿಕೆಟಿಗರಿಗೆ ಬಿಸಿಸಿಐ 2003-04ರಿಂದ ಪಿಂಚಣಿ ನೀಡುತ್ತ ಬಂದಿದೆ. 2015ರಲ್ಲಿ ಪಿಂಚಣಿ ಮೊತ್ತ ಹೆಚ್ಚಿಸಲು ಮನವಿ ಸಲ್ಲಿಸಿದ್ದರೂ ಬಿಸಿಸಿಐ ಅದನ್ನು ಇನ್ನೂ ಪುರಸ್ಕರಿಸಿರಲಿಲ್ಲ. ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಬಿಸಿಸಿಐ ಆಡಳಿತಾಧಿಕಾರಿಗಳಿಗೆ ಮನವಿ ಮಾಡಿದ್ದು, ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆ ಸಿಕ್ಕಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next