Advertisement

ಸಾರ್ವಜನಿಕವಾಗಿ ಎದುರು ಮನೆಯ ಸ್ತ್ರೀ ಮೇಲೆ ಹಲ್ಲೆ

05:25 PM Jul 17, 2021 | Team Udayavani |

ಕೆಜಿಎಫ್:ನಗರದಪಾರಾಂಡಹಳ್ಳಿಯ ನಿವಾಸಿಲೈಸಿ ಎಂಬಾಕೆಯ ಮೇಲೆ ಎದುರುಮನೆಯವರು ಸಾರ್ವಜನಿಕವಾಗಿ ಮನಬಂದಂತೆ ಥಳಿಸಿದ ಘಟನೆ ನಡೆದಿದೆ.ಘಟನೆಯಲ್ಲಿ ಗಾಯಗೊಂಡ ಲೈಸಿ ಎಂಬಾಕೆಯನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.

Advertisement

ಲೈಸಿ ಬೆಳಗ್ಗೆ 5.30ಕ್ಕೆ ಊರಿಗೆ ಹೋಗಲು ಮನೆಯಿಂದ ಆಚೆ ಬಂದು ಮನೆಯಲ್ಲಿದ್ದ ದಿವ್ಯಾ ಎಂಬಾಕೆಯನ್ನು ಕರೆದರು. ಆಗಎದುರು ಮನೆ ಬಳಿ ಕಸ ಗುಡಿಸುತ್ತಿದ್ದಧನಲಕ್ಷ್ಮೀ ತನ್ನ ವಿರುದ್ಧ ಲೈಸಿ ಮಾತನಾಡುತ್ತಿದ್ದಾರೆ ಎಂದು ಭಾವಿಸಿ ಪೊರಕೆಯಿಂದ ಹೊಡೆಯಲು ಶುರು ಮಾಡಿದರು.

ಆಕೆಯ ಪುತ್ರ ಶರತ್‌ ಮತ್ತುಗಂಡ ರಾಮಕೃಷ್ಣರೆಡ್ಡಿ ಸಹ ದೊಣ್ಣೆಯಿಂದಹೊಡೆದರು. ಈ ಎಲ್ಲಾ ಘಟನೆಗಳು ಮೊಬೈಲ್‌ನಲ್ಲಿ ಚಿತ್ರಿತವಾಗಿದೆ. ರಾಬರ್ಟಸನ್‌ಪೇಟೆಪೊಲೀಸರು ರಾಮಕೃಷ್ಣಾರೆಡ್ಡಿ ಮತ್ತು ಶರತ್‌ನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next