Advertisement

ಕ್ಯಾಂಟರ್‌ ಡಿಕ್ಕಿ : ಪೆಟ್ಟಿಗೆ ಅಂಗಡಿ ಧ್ವಂಸ

07:24 PM May 27, 2021 | Team Udayavani |

ಸಕಲೇಶಪುರ: ಕ್ಯಾಂಟರ್‌ ಲಾರಿಯೊಂದುಚಾಲಕನ ನಿರ್ಲಕ್ಷ್ಯದ ಪರಿಣಾಮ ಡಿಕ್ಕಿಹೊಡೆದ ಪರಿಣಾಮ ಎರಡು ಪೆಟ್ಟಿಗೆ ಅಂಗಡಿಗಳು ಧ್ವಂಸವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

Advertisement

ಪಟ್ಟಣದ ತೇಜಸ್ವಿ ಚಿತ್ರಮಂದಿರದ ಸಮೀಪ ಮಂಗಳವಾರ ರಾತ್ರಿ1.30ರ ಸಮಯದಲ್ಲಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕ್ಯಾಂಟರ್‌ಲಾರಿಯೊಂದು ಚಾಲಕನ ನಿರ್ಲಕ್ಷ್ಯದ ಪರಿಣಾಮ ವೇಗವಾಗಿ ಬಂದು ಹೆದ್ದಾರಿ ಬದಿಯಲ್ಲಿದ್ದ ಎರಡು ಪೆಟ್ಟಿಗೆ ಅಂಗಡಿಗಳಿಗೆನುಗ್ಗಿದ ಪರಿಣಾಮ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಜೊತೆಗೆ ವಿದ್ಯುತ್‌ಕಂಬವೊಂದು ಮುರಿದು ಬಿದ್ದಿದೆ.

ಈ ಸಮಯದಲ್ಲಿ ಪೆಟ್ಟಿಗೆ ಅಂಗಡಿಯಹಿಂಭಾಗದಲ್ಲಿ ನಾಗರಾಜ್‌ ಹಾಗೂ ಅವರ ಪತ್ನಿಇದ್ದಿದ್ದು ಅದೃಷ್ಟವಷಾತ್‌ ಅವರಿಗೆ ಯಾವುದೇಅಪಾಯ ಸಂಭವಿಸಿಲ್ಲ. ಕ್ಯಾಂಟರ್‌ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಿದ್ಯುತ್‌ ಕಂಬಬಿದ್ದಿದ್ದರಿಂದ ದಿನವಿಡೀ ಪಟ್ಟಣದ ಕೆಲವುಬಡಾವಣೆಗಳಿಗೆ ವಿದ್ಯುತ್‌ ಪೂರೈಕೆ ಇರಲಿಲ್ಲ.ನಂತರ ಚೆಸ್ಕಾಂ ಸಿಬ್ಬಂದಿಗಳು ದಿನವಿಡೀ ಕೆಲಸಮಾಡಿ ವಿದ್ಯುತ್‌ ಸಂಪರ್ಕ ನೀಡಿದರು. ತೇಜಸ್ವಿಚಿತ್ರಮಂದಿರ ಸಮೀಪ ರಾಷ್ಟ್ರೀಯ ಹೆದ್ದಾರಿ75 ಹಾಗೂ ಸಕಲೇಶಪುರ-ಬೇಲೂರು ರಾಜ್ಯಹೆದ್ದಾರಿಯಿಂದ ಬರುವ ವಾಹನಗಳುಒಂದೆಡೆಗೆ ಹೋಗಬೇಕಾಗಿದ್ದು, ಈ ವೃತ್ತವುಸಂಪೂರ್ಣ ಕಿರಿದಾಗಿರುವುದರಿಂದಅಪಘಾತಗಳು ಸಾಮಾನ್ಯವಾಗಿದೆ. ಕೂಡಲೇಈ ವೃತ್ತವನ್ನು ಅಗಲೀಕರಿಸಲು ತಾಲೂಕುಆಡಳಿತ ಕ್ರಮ ಕೈಗೊಳ್ಳಬೇಕಾಗಿದೆ. ನಗರಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next