Advertisement

ಬಿಬಿಎಂಪಿ ನೌಕರ ಆತ್ಮಹತ್ಯೆಗೆ ಶರಣು

02:25 PM Apr 01, 2021 | Team Udayavani |

ಬೆಂಗಳೂರು: ಬಿಬಿಎಂಪಿ ನೌಕರನೋರ್ವ ಆತ್ಮಹತ್ಯೆಗೆಶರಣಾಗಿರುವ ಘಟನೆ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ವಿಜಯನಗರ ನಿವಾಸಿ ರಾಕೇಶ್‌ನೇಣಿಗೆ ಶರಣಾದ ಬಿಬಿಎಂಪಿ ನೌಕರ. ಮೃತರಾಕೇಶ್‌, ಬಿಬಿಎಂಪಿ ಪೂರ್ವ ವಲಯದ ಜಂಟಿಆಯುಕ್ತೆ ಪಲ್ಲವಿ ಕಚೇರಿಯಲ್ಲಿ ಸಹಾ ಯಕನಾಗಿದ್ದಎನ್ನಲಾಗಿದೆ.

ವೈಯಕ್ತಿಕ ಕಾರಣಗಳಿಂದ ಮನೆಯಲ್ಲಿನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಕೇಶ್‌ಗೆ ಕರ್ತವ್ಯದ ಸ್ಥಳದಲ್ಲಿ ಏನಾದರು ಕಿರುಕುಳಉಂಟಾಗಿತ್ತಾ? ಎನ್ನುವುದರ ಬಗ್ಗೆಯೂ ಪೊಲೀಸರುಪರಿಶೀಲನೆ ಕೈಗೊಂಡಿದ್ದಾರೆ.

ಕಚೇರಿಯಲ್ಲಿ ಸಾಕಷ್ಟುಒತ್ತಡದಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆ ಸಹದ್ಯೋಗಿಗಳಬಳಿ ಹೇಳಿಕೊಂಡಿದ್ದ ಎಂದು ತಿಳಿದು ಬಂದಿದೆ.ರಾಕೇಶ್‌ ಆತ್ಮಹತ್ಯೆ ಬಗ್ಗೆ ಸಾಕಷ್ಟು ಅನುಮಾನವ್ಯಕ್ತವಾಗಿದೆ. ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ವಿಜಯನಗರ ಠಾಣೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next